ಮಂಗಳೂರು: ಮಂಗಳೂರಿನಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ಶಾಂತಿ ಸಭೆ ಜರಗಿದ್ದು, ಸುಮಾರು 100 ಮಂದಿ ಸಾರ್ವಜನಿಕ ಗಣೇಶೋತ್ಸವ ಸಂಘಟಕರು ಭಾಗವಹಿಸಿದ್ದರು. ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಂದರ್ಭದಲ್ಲಿ ಹಾಗೂ ಗಣೇಶ ವಿಗ್ರಹ ವಿಸರ್ಜನ ಮೆರವಣಿಗೆ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಗಣೇಶ ಮಂಟಪ ಸಂಘಟಕರು ಅನುಸರಿಸಬೇಕಾದ ಕ್ರಮಗಳು
1. ಗಣೇಶ ವಿಗ್ರಹ ಸ್ಥಾಪಿಸಿದ ಸ್ಥಳದಲ್ಲಿ ಬೆಂಕಿ ದುರಂತ ನಿವಾರಿಸಲು ವ್ಯವಸ್ಥೆ.
2. ಜಾಗದ ಮಾಲಕರ ಅನುಮತಿ ಹಾಗೂ ವಿದ್ಯುತ್ ಸಂಪರ್ಕ ಕುರಿತಂತೆ ಸೂಕ್ತ ಪರವಾನಿಗೆ.
3. ರಾತ್ರಿ 10 ಗಂಟೆ ವೇಳೆಗೆ ಸಾರ್ವಜನಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಬೇಕು.
4. ಆಸ್ಪತ್ರೆ ಮತ್ತು ಶಾಲಾ ಆವರಣಗಳಲ್ಲಿ ಆರೋಗ್ಯ ಸಂಬಂಧಿತ ಮಾಲಿನ್ಯ ಸಮಸ್ಯೆ ನಿವಾರಿಸಲು ಧ್ವನಿ ಮತ್ತು ಪಟಾಕಿಗಳನ್ನು ನಿಯಮಿತ