ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಐಟಿ ಸೆಲ್ನ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿಯವರನ್ನು ಮುಂದಿನ ಅವಧಿಗೆ ನೇಮಕಗೊಳಿಸಲಾಗಿದೆ.
ಕೆ.ಪಿ.ಸಿ.ಸಿ ಅಧ್ಯಕ್ಷರಾದ ಜಿ. ಪರಮೇಶ್ವರರವರ ಆದೇಶದ ಮೇರೆಗೆ ಈ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ ಎಂದು ರಾಜ್ಯ ಕಾಂಗ್ರೇಸ್ ಮಾಹಿತಿ ತಂತ್ರಜ್ಞಾನ ಘಟಕದ ಅಧ್ಯಕ್ಷ ಪಿ.ಎಸ್. ನಿರಂಜನ್ ರಾವ್ ತಿಳಿಸಿದ್ದಾರೆ. ಶ್ರೀಯುತರು ಹಿಂದಿನ ಅವಧಿಯಲ್ಲಿ ಕೆ.ಪಿ.ಸಿ.ಸಿ ಐಟಿ ಸೆಲ್ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದು, ಇದೀಗ ಪದೋನ್ನತಿಗೊಳಿಸಲಾಗಿದೆ. ಶ್ರೀಯುತರು ಹವ್ಯಾಸಿ ವ್ಯಂಗ್ಯಚಿತ್ರಕಾರರೂ ಹಾಗೂ ಅಂತರ್ಜಾಲ ಬರಹಗಾರರಾಗಿರುತ್ತಾರೆ.