Thursday 2nd, May 2024
canara news

ನೇಮೊದ ಬೂಳ್ಯ ಸೆಪ್ಟೆಂಬರ್ 22ರಂದು ತೆರೆಗೆ

Published On : 20 Sep 2017   |  Reported By : Rons Bantwal


ಉಡುಪಿ: ಭೂತಾರಾಧನೆ ಸಂಬಂಧಪಟ್ಟ ಪರತಿ ಮಂಗಣೆ ಪಾಡ್ದನ ಆಧಾರಿತ ನೇಮೊದ ಬೂಳ್ಯ ಚಲನಚಿತ್ರವು ಸೆಪ್ಟೆಂಬರ್ 22ರಂದು ಕರಾವಳಿಯ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ನೇಮೊದ ಬೂಳ್ಯ ಸಿನೆಮಾವು ಮಂಗಳೂರಿನಲ್ಲಿ ಬಿಗ್‍ಸಿನೆಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಡಯಾನಾ, ಮೂಡುಬಿದ್ರೆಯಲ್ಲಿ ಅಮರಶ್ರೀ ಪುತ್ತೂರಿನಲ್ಲಿ ಅರುಣಾಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಶ್ರೀಮತಿ ಶಬರಿ ಚಂದ್ರಶೇಖರ್ ಮಾಡ ಅರ್ಪಿಸುವ ಬಿ.ಕೆ. ಗಂಗಾಧರ ಕಿರೋಡಿಯನ್ ನಿರ್ದೇಶನದ ನೇಮೊದ ಬೂಳ್ಯ ಸತ್ಯ ಘಟನೆಯಾಧರಿಸಿದ ನಾಟಕವಾಗಿದ್ದು ಈಗ ಅದನ್ನು ನಿರ್ಮಾಪಕ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ಸಿನಿಮಾವನ್ನಾಗಿ ಪರಿವರ್ತಿಸಿದ್ದಾರೆ. ಬಿ.ಕೆ ಗಂಗಾಧರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದುಚಿತ್ರ ನಿರ್ದೇಶಿಸಿದ್ದಾರೆ. ಸಿನೆಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಮೆಚ್ಚುಗೆ ಗಳಿಸಿದೆ.200 ವರ್ಷಗಳ ಹಿಂದೆ ಪುತ್ತೂರಿನ ಬೆಟ್ಟಂಪಾಡಿಯಲ್ಲಿ ನಡೆದ ಸತ್ಯಘಟನೆಯನ್ನು ಆಧರಿಸಿ ‘ಪರತಿ ಮಂಗಣೆ’ ಪಾಡ್ದನವನ್ನು ಸಿನೆಮಾ ರೂಪಕ್ಕೆ ಇಳಿಸಲಾಗಿದೆ.

ವಿ. ಮನೋಹರ್ ಸಂಗೀತ ಮತ್ತು ಸಾಹಿತ್ಯ ಒದಗಿಸಿದ್ದಾರೆ, ಉಮಾಪತಿ ಬೆಂಗಳೂರು ಕ್ಯಾಮರಾ, ಪ್ರಕಾಶ್‍ಕಾರಿಂಜ ಸಂಕಲನವಿದ್ದು, ಪ್ರತಾಪ್ ಸಾಲ್ಯಾನ್‍ಕದ್ರಿ ಸಹನಿರ್ದೇಶಕರಾಗಿದ್ದಾರೆ.ನೃತ್ಯ ಮದನ್ ಹರಿಣಿ. ಸಿನೆಮಾದಲ್ಲಿ ಪ್ರೀತಂ ಶೆಟ್ಟಿ, ಕಿರುತೆರೆ ನಟಿರಜನಿ, ಪ್ರದೀಪ್‍ಚಂದ್ರ ಕುತ್ಪಾಡಿ ಮುಖ್ಯ ಪಾತ್ರದಲ್ಲಿದ್ದು, ಇನ್ನುಳಿದಂತೆ ಮನೋಹರ್ ವಿಠಲ್, ರಮೇಶ್ ಭಟ್, ಮಂಡ್ಯರಮೇಶ್, ರಘುರಾಮ್ ಶೆಟ್ಟಿ, ರಮೇಶ್ ಕಲ್ಲಡ್ಕ. ಆರ್.ಎನ್. ಶೆಟ್ಟಿ ಕಳವಾರ್, ಮೋಹನ್ ಬೋಳಾರ್, ಎನ್.ಎಸ್. ರೈ, ರಾಧಾಕೃಷ್ಣಕುಂಬ್ಳೆ, ತಾರಾನಾಥಉರ್ವ, ಸುರೇಶ್ ನಿಟ್ಟೆ, ಸುರೇಶ್‍ದೇವಾಡಿಗ, ಜಯಶೀಲ ಮರೋಳಿ, ವೀಣಾಜಯಂತ್, ರತ್ನಾವತಿ ಜೆ, ಬೈಕಾಡಿ, ಪವಿತ್ರ ಶೆಟ್ಟಿಉಡುಪಿ, ಪ್ರತಿಮಾ ಉಡುಪಿ ಮೊದಲಾದವರುಇದ್ದಾರೆ.ಸಿನೆಮಾದ ಹಾಡುಗಳು ಜನಪ್ರಿಯಗೊಂಡಿದ್ದು, ಸಿನೆಮಾದ ಬಗ್ಗೆ ಹೆಚ್ಚಿನ ಭರವಸೆಯನ್ನು ಮೂಡಿಸಿದೆ.ಕರಾವಳಿಯ ಹಸಿರು ಪರಿಸರದ ನಡುವೆ ಹಾಡುಗಳನ್ನು ಚಿತ್ರೀಕರಿಸಿರುವ ಹಿನ್ನೆಲೆಯಲ್ಲಿ ಹಾಡುಗಳು ತುಂಬಾ ಹಸಿರಿನಿಂದ ಕೂಡಿದ ಸೊಗಸನ್ನುಕಾಣಬಹುದಾಗಿದೆ.ನೇಮೊದ ಬೂಳ್ಯ ಚಿತ್ರದಲ್ಲಿಒಟ್ಟು 6 ಹಾಡುಗಳಿವೆ. ಸಾಹಿತ್ಯ ಮತ್ತು ಸಂಗೀತವನ್ನುಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ನೀಡಿದ್ದಾರೆ.ಪೂಜಲ್ಲೇ ಮುಡಿತೊಂದು.... ಹಾಡನ್ನು ಫಣೇಂದ್ರ ಕೃಷ್ಣ ಹಾಗೂ ನಾಗಚಂದ್ರಿಕಾ ಭಟ್ ಹಾಡಿದ್ದಾರೆ.ಓ ಮದನ ಮೋಕೆದ ಮದಿಮಾಲೆ.... ಹಾಡನ್ನು ಬದ್ರೀಪ್ರಸಾದ್, ಲೇ ಲೇಯೇ ಲೇಯೇ ಹಾಡನ್ನು ನಾಗಚಂದ್ರಿಕಾ ಭಟ್, ಕಣ್ಣ್‍ಡ್ ನೆತ್ತೆರೆಜ್ಜಾಂದಿ.... ಹಾಡನ್ನುಚಿಂತನ್ ವಿಕಾಸ್, ದೈವೋನ್ ನಂಬೋಡು.... ಹಾಡನ್ನು ಶಶಾಂಕ್ ಶೇಷಗಿರಿ ಹಾಗೂ ಡೆನ್ನಾಡೆನ್ನಾನಡೆನ್ನ ಹಾಡನ್ನು ಪ್ರತಿಮಾ ಭಟ್ ಹಾಡಿದ್ದಾರೆ.

ಈ ಚಿತ್ರದ ಯಶಸ್ಸಿಗಾಗಿ ಹಿರಿತೆರೆ ಹಾಗು ಕಿರುತೆರೆ ಮತ್ತು ರಂಗಭೂಮಿ ನಟ ಶ್ರೀಪಾದ್ ಹೆಗಡೆ ತಮ್ಮನ್ನು ತೊಡಗಿಸಿಕೊಂಡು ಶ್ರಮಿಸುತ್ತಿದ್ದಾರೆ.

ಸಿನೆಮಾದ ಹಾಡುಗಳು ಜನಪ್ರಿಯಗೊಂಡಿದ್ದು, ಸಿನೆಮಾದ ಬಗ್ಗೆ ಹೆಚ್ಚಿನ ಭರವಸೆ ಮೂಡಿಸಿದೆ.

ಕರಾವಳಿಯ ಹಸಿರು ಪರಿಸರದ ನಡುವೆ ಹಾಡುಗಳನ್ನು ಚಿತ್ರೀಕರಿಸಿರುವ ಹಿನ್ನೆಲೆಯಲ್ಲಿ ಹಾಡುಗಳು ತುಂಬಾ ಹಸಿರಿನ ಸೊಗಸನ್ನುಕಾಣಬಹುದು.

ನೇಮೊದ ಬೂಳ್ಯ ಚಿತ್ರದಲ್ಲಿ 6 ಹಾಡುಗಳಿವೆ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here