ಮಂಗಳೂರು: ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಕೀಳುಭಾಷೆಯಲ್ಲಿ ಮಾತನಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಮಂಗಳೂರು ಹೊರವಲಯದ ಅಸೈಗೋಳಿಯಲ್ಲಿ ನಡೆದ ಉಳ್ಳಾಲ ಮತ್ತು ಮುಡಿಪು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸ್ವಾತಂತ್ರ್ಯಹೋರಾಟದಲ್ಲಿ ನೆಹರೂ ಪಾತ್ರದ ಬಗ್ಗೆ ಉಲ್ಲೇಖೀಸುತ್ತ ಅವರು ಮಾತನಾಡುತ್ತಿದ್ದರು.
'ಸ್ವಾತಂತ್ರ್ಯ ಬರಬೇಕೆಂದು ನೆಹರೂ ಜೈಲಿನಲ್ಲಿ ಕುಳಿತಿದ್ದರು. ಅಂತಹ ನೆಹರೂ ಅವರನ್ನು ಚಕ್ರವರ್ತಿ ಸೂಲಿಬೆಲೆ ಎನ್ನುವ ವ್ಯಕ್ತಿ ಎನ್ನುತ್ತ ಕೀಳುಭಾಷೆ ಪ್ರಯೋಗಿಸಿದ್ದಾರೆ. ಬಳಿಕ ವೇದಿಕೆಯಲ್ಲಿ ಆಸೀನರಾಗಿರುವ ಇತರರ ಬಳಿ ತಿರುಗಿ ನೋಡುವ ದೃಶ್ಯ ವೀಡಿಯೋದಲ್ಲಿದೆ. ಅದಕ್ಕೆ ಕಾರ್ಯಕರ್ತರೂ ದನಿಗೂಡಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.ಇದು ವಿವಾದಕ್ಕೆ ಕಾರಣವಾಗಿದೆ.