Thursday 2nd, May 2024
canara news

ಭಾರತ್ ಬ್ಯಾಂಕ್‍ನಿಂದ `ಬಿಲ್ ಪೇಮೆಂಟ್ ಎಕ್ರಾಸ್ ಕೌಂಟರ್' ಸೇವಾರಂಭ

Published On : 26 Sep 2017   |  Reported By : Rons Bantwal


ಮುಂಬಯಿ, ಸೆ.25: ದಿ.ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್ ಸಂಸ್ಥೆಯು ತನ್ನ ಗ್ರಾಹಕರ ಹೆಚ್ಚುವರಿ ಸೇವೆಗಾಗಿ `ಬಿಲ್ ಪೇಮೆಂಟ್ ಎಕ್ರಾಸ್ ಕೌಂಟರ್' (ಬಿಬಿಪಿಎಸ್) ಉಪಯೋ ಗಿತ ಸೇವೆ ಆರಂಭಿಸಿತು. ಇತ್ತೀಚೆಗೆ ಗೋರೆಗಾಂ ಪೂರ್ವದ ಮಾರುತಿಗಿರಿ ಸ್ವಕಟ್ಟಡದಲ್ಲಿನ ಕೇಂದ್ರ ಕಚೇರಿಯಲ್ಲಿ ನಡೆದ ಬ್ಯಾಂಕ್ ಮಂಡಳಿ ಸಭೆಯಲ್ಲಿ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಈ ಸೇವೆಗೆ ಚಾಲನೆಯನ್ನೀಡಿದರು.

ಬ್ಯಾಂಕ್‍ನ ಗ್ರಾಹಕರು ಸೇರಿದಂತೆ ರಾಷ್ಟ್ರದ ಯಾವುದೇ ವ್ಯಕ್ತಿಗಳು ತಮ್ಮ ವಿದ್ಯುಚ್ಛಕ್ತಿ ಬಿಲ್, ದೂರವಾಣಿ, ಗ್ಯಾಸ್, ಡಿಟಿಹೆಚ್ ಬಿಲ್‍ಗಳ ಹಣ ಸಂದಾಯವನ್ನು ಭಾರತ್ ಬ್ಯಾಂಕ್‍ನ ಯಾವುದೇ ಶಾಖೆಗಳಿಂದ ಉಚಿತ ಸೇವೆಯಾಗಿಸಿ `ಬಿಲ್ ಪೇಮೆಂಟ್ ಎಕ್ರಾಸ್ ಕೌಂಟರ್' (ಬಿಬಿಪಿಎಸ್) ಉಪಯೋಸಿ ಆಯಾ ಸಂಸ್ಥೆಗಳಿಗೆ ನಗದು ಅಥವಾ ಚೆಕ್ ಮೂಲಕವೂ ನೇರವಾಗಿ ಬಟವಾಡೆ ಮಾಡಬಹುದಾಗಿದೆ.

ಈ ಸಂದರ್ಭದಲ್ಲಿ ಬ್ಯಾಂಕ್‍ನ ನಿರ್ದೇಶಕರುಗಳಾದ ಪುಷ್ಫಲತಾ ಎನ್.ಸಾಲ್ಯಾನ್, ಕೆ.ಎನ್ ಸುವರ್ಣ, ಜೆ.ಎ ಕೋಟ್ಯಾನ್, ಯು.ಎಸ್ ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ರೋಹಿತ್ ಎಂ.ಸುವರ್ಣ, ಹರೀಶ್ಚಂದ್ರ ಜಿ.ಮೂಲ್ಕಿ, ದಾಮೋದರ ಸಿ. ಕುಂದರ್, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಅಶೋಕ್ ಎಂ. ಕೋಟ್ಯಾನ್, ಅನ್ಬಲಗನ್ ಸಿ.ಹರಿಜನ, ಸಿ.ಟಿ ಸಾಲ್ಯಾನ್ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹ ಕ ಅಧಿಕಾರಿ ಸಿ.ಆರ್ ಮೂಲ್ಕಿ, ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್.ಕರ್ಕೇರಾ, ನವೀನ್‍ಚಂದ್ರ ಎಸ್.ಬಂಗೇರಾ, ದಿನೇಶ್ ಬಿ.ಸಾಲ್ಯಾನ್, ನಿತ್ಯಾನಂದ ಎಸ್.ಕಿರೋಡಿಯನ್ (ಮುಖ್ಯ ಮಾಹಿತಿ ಅಧಿಕಾರಿ), ಮಾಹಿತಿ ತಂತ್ರಜ್ಞಾನ ಇಲಾಖೆಯ ಉನ್ನತಾಧಿಕಾರಿಗಳಾದ ರಾಜೇಶ್ ಅವಿೂನ್, ಪೂಜಾ ರಾಣೆ ಮತ್ತಿತರರು ಉಪಸ್ಥಿತರಿದ್ದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here