ಮುಂಬಯಿ, ಸೆ.29: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಹಿರಿಯ ಸದಸ್ಯ, ಮಾಜಿ ಗೌರವಾಧ್ಯಕ್ಷ, ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ ಮಾಜಿ ನಿರ್ದೇಶಕ ಏಣಗುಡ್ಡೆ ನಾಗೇಶ್ ಅವರ ಸುಪುತ್ರ ಪ್ರಫುಲ್ಚಂದ್ರ ನಾಗೇಶ್ (52.) ಅವರು ಇಂದಿಲ್ಲಿ ಬುಧವಾರ ಬೆಳಿಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಕಟಪಾಡಿ ಏಣಗುಡ್ಡೆ ಒಂದನೇ ಗುರಿಕಾರ ಮೂಲದವ -ರಾಗಿದ್ದ ಮೃತರು ಮುಂಬಯಿ ಮಹಾನಗರದಲ್ಲಿ ಎಲ್ಜಿ ಸಂಸ್ಥೆಯಲ್ಲಿ ಉದ್ಯೋಗಿ ಆಗಿದ್ದು ಸೇವೆಯಿಂದ ಸ್ವಯಂ ನಿವೃತ್ತಿ (ವಿಆರ್ಎಸ್) ಪಡೆದು ಉಡುಪಿಯಲ್ಲಿ ಸ್ವದೋಗ ಆರಂಭಿಸಲು ಸಿದ್ಧತೆ ನಡೆಸಿ ಒಂದೆರಡು ದಿನಗಳಲ್ಲಿ ಆರಂಭಿಸುವಲ್ಲಿದ್ದರು.
ತಂದೆಯಂತೆ ಇವರೂ ಸಮಾಜಸೇವೆಯಲ್ಲಿ ಅಹರ್ನಿಶಿಯಾಗಿ ಸೇವೆ ಸಲ್ಲಿಸಿರುವರು. ಅತೀವ ಸಾಮಾಜಿಕ ಕಾಳಜಿ ಹೊಂದಿದ್ದ ಪ್ರಫುಲ್ ಬಿಲ್ಲವರ ಅಸೋಸಿಯೇಶನ್ನಲಿಲ್ಕಾರ್ಯಕ್ರಮಗಳಲ್ಲೂ ಸಕ್ರೀಯರಾಗಿದ್ದರು. ಮೃತರು ಪತ್ನಿ ಶೈಲಾ (ಚೆಂಬೂರುನ ಬಿಆರ್ಸಿಎ ಉದ್ಯೋಗಿ), ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ವೈ.ನಾಗೇಶ್ ಅವರೂ 2014ರ ಸೆ.29ರಂದು ದೈವಾಧೀನರಾಗಿದ್ದರು.
ಸುದ್ದಿ ತಿಳಿದಾಕ್ಷಣ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಉಪಾಧ್ಯಕ್ಷ ಭಾಸ್ಕರ ವಿ.ಬಂಗೇರ, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ್ ಜಿ.ಅಂಚನ್, ಗೌ| ಜೊತೆ ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್, ಎನ್.ಎಂ ಸನೀಲ್, ಎಂ.ಆನಂದ್ ಪೂಜಾರಿ, ರವಿರಾಜ್ ಕಲ್ಯಾಣ್ಪುರ್, ಶ್ರೀಧರ್ ಬಂಗೇರಾ ಬೋರಿವಿಲಿ ಆಸ್ಪತ್ರೆಗೆ ಧಾವಿಸಿ ಮೃತರ ಅಂತ್ಯಕ್ರಿಯೆ ಬಗ್ಗೆ ಸೇವಾ ನಿರತರಾದರು.
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ, ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಪದಾಧಿಕಾರಿಗಳು ಪೂರ್ವಾಧ್ಯಕ್ಷ ಎಲ್.ವಿ ಅಮೀನ್, ಭಾರತ್ ಬ್ಯಾಂಕ್ನ ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲ್ಯಾನ್, ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್ ಕೋಟ್ಯಾನ್, ಆಡಳಿತ ನಿರ್ದೇಶಕ ಸಿ.ಆರ್.ಮೂಲ್ಕಿ, ಬಿಸಿಸಿಐ ಅಧ್ಯಕ್ಶ ಎನ್.ಟಿ ಪೂಜಾರಿ ಉದ್ಯಮಿಗಳಾದ ಸುರೇಂದ್ರ ಎ.ಪೂಜಾರಿ, ಹರೀಶ್ ಜಿ.ಅಮೀನ್, ತೋನ್ಸೆ ಸಂಜೀವ ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ ಸೇರಿದಂತೆ ಮಹಾನಗರದಲ್ಲಿನ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.