(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಸೆ.27: ಮುಂಬಯಿ ಕನ್ನಡ ಸಂಘ ಇದರ ಮಹಿಳಾ ವಿಭಾಗದ ವತಿಯಿಂದ ಶ್ರೀ ಶಾರದಾ ಪೂಜಾ ಮಹೋತ್ಸವವು ಇಂದಿಲ್ಲಿ ಬುಧವಾರ ಮಾಟುಂಗದಲ್ಲಿನ ಸಂಘದ ಕಚೇರಿಯಲ್ಲಿ ಇಂದಿಲ್ಲಿ ಸಂಜೆ ನೆರವೇರಿಸಲ್ಪಟ್ಟಿತು. ಮುಖ್ಯ ಅತಿಥಿsಯಾಗಿ ಉಪಸ್ಥಿತರಿದ್ದ ಸಾಹಿತಿ ಮತ್ತು ಸಮಾಜ ಸೇವಕಿ ಪ್ರಭಾ ಎನ್.ಸುವರ್ಣ ಅವರು ದೀಪ ಬೆಳಗಿಸಿ ಚಾಲನೆಯನ್ನಿತ್ತರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳಾ ಸದಸ್ಯೆಯರಿಂದ ಅರಸಿನ ಕುಂಕುಮ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಮೊದಲಾದ ಕಾರ್ಯಕ್ರಮಗಳು ನೇರವೇರಿದವು. ಶಾಲಿನಿ ಪೈ ಮತ್ತು ಬಳಗ ಥಾಣೆ ಇವರಿಂದ ಭಜನೆ ಮತ್ತು ಭಕ್ತಿಗೀತೆ ಕಾರ್ಯಕ್ರಮ ನಡೆಸಲಾಯಿತು. ಪ್ರಕಾಶ್ ನಾಯ್ಕ್ ತಬಲಾ ಮತ್ತು ಬಾಜಿ ರಾವ್ ಇವರು ಹಾರ್ಮೊನಿಯಂ ವಾದಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ| ಎಸ್.ಕೆ ಭವನಿ, ಕೋಶಾಧಿಕಾರಿ ಸುಧಾಕರ ಪೂಜಾರಿ, ಎಸ್.ಕೆ ಪದ್ಮನಾಭ, ಮಹಿಳಾ ವಿಭಾಗ ಉಪ ಕಾರ್ಯಧ್ಯಕ್ಷೆ ನರ್ಮಾದಾ ಎಸ್.ಕಿಣಿ, ಕಾರ್ಯದರ್ಶಿ ಸುಗುಣ ವಿ.ಶೆಟ್ಟಿ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಜನಿ ಪೈ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣಗೈದರು. ಶಾಲಿನಿ ಪೈ ಅವರು ಪ್ರಾರ್ಥನೆಯನ್ನಾಡಿದರು. ಕಾರ್ಯಕಾರಿ ಸಮಿತಿಯ ಸದಸ್ಯೆ ಶಾರದಾ ಅಂಬೆಸಂಗೆ ಅವರು ಅತಿಥಿsಗಳನ್ನು ಪರಿಚಯಿಸಿ ಧನ್ಯವಾದಗೈದರು. ಸಂಘದ ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ಕಾರ್ಯಕ್ರಮ ನಿರೂಪಿಸಿದ