ಆಸ್ಪತ್ರೆಗೆ ದಾಖಲಿಸಿದ ಮಾಜಿ ಶಾಸಕ ಕೃಷ್ಣ ಎಸ್.ಹೆಗ್ಡೆ
ಮುಂಬಯಿ, ಸೆ.30: ಉಪನಗರ ವಿಲೇಪಾರ್ಲೆ ಪೂರ್ವದ ಪ್ರಬೋಧಣ್ಕರ್ ಠಾಕ್ರೆ ಸ್ಫೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಕೇರಂ ಆಟ ಪೂರೈಸಿ ಕೈತೊಳೆಯಲು ಹೋಗುತ್ತಿರುವಂತೆ ಏಕಾಏಕಿ ಕುಸಿದು ಬಿದ್ದ ಹಿರಿಯ ನಾಗರೀಕ ಕೃಷ್ಣ ಸಿದ್ಧು ಶೆಟ್ಟಿ (70.) ನಿಧನರಾದರು.
ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಕುಕ್ಕುಂದೂರು ಮೂಲತ: ಕೃಷ್ಣ ಶೆಟ್ಟಿ ವಿಲೇಪಾರ್ಲೆ ಪೂರ್ವದ ನಿವಾಸಿ ಆಗಿದ್ದು ಮ್ಯಾಪೆÇ್ಕೀ ಸಂಸ್ಥೆಯಲ್ಲಿ ಉದ್ಯೋಗಿ ಆಗಿದ್ದು ನಿವೃತ್ತರಾಗಿದ್ದರು. ಎಂದಿಂತೆ ಒಳಾಂಗಣ ಆಟವಾಡಲು ಕಳೆದ ಬುಧವಾರ ಸಂಜೆ ಸ್ಫೋರ್ಟ್ಸ್ ಕಾಂಪ್ಲೆಕ್ಸ್ಗೆ ಆಗಮಿಸಿದ್ದು ಈ ವೇಳೆ ಸ್ಥಳೀಯ ಮಾಜಿ ಶಾಸಕ ಕೃಷ್ಣ ಎಸ್.ಹೆಗ್ಡೆ ಅಲ್ಲಿದ್ದು ತತ್ಕ್ಷಣವೇ ತನ್ನ ಕಾರನ್ನು ಹತ್ತಿಸಿ ಸ್ಥಳೀಯ ನಿತ್ಯಾನಂದ್ ಖಾಸಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಆಗದೆ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಮೂವರು ಗಂಡು ಮತ್ತು ಒಂದು ಹೆಣ್ಣು ಮತ್ತು ಬಂಧು-ಬಳಗವನ್ನು ಅಗಲಿದ್ದಾರೆ.