ಮಂಗಳೂರು: ಮೊಬೈಲ್ ನೀಡಲಿಲ್ಲ ಎಂದು ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ಹೊರವಲಯದ ಪಿಲಾರ್ ಎಂಬಲ್ಲಿ ನಡೆದಿದೆ.ಆತ್ಮಹತ್ಯೆ ಗೆ ಶರಣಾದ ವಿದ್ಯಾರ್ಥಿಯನ್ನು ಅರ್ಫಾಝ್(17) ಎಂದು ಗುರುತಿಸಲಾಗಿದೆ.
ಮೊಬೈಲ್ ನಲ್ಲೆ ಹೆಚ್ಚಿನ ಸಮಯ ಕಳೆಯುತ್ತಿದ್ದ ಅರ್ಫಾರ್ಝ್ ವರ್ತನೆಗೆ ತಂದೆ ಕೋಪಗೊಂಡು ತರಾಟೆಗೆ ತೆಗೆದುಕೊಂಡಿದ್ದರು.ಈ ಹಿನ್ನೆಲೆಯಲ್ಲಿ ಅರ್ಫಾರ್ಝ್ ನ ಮೊಬೈಲನ್ನು ತಂದೆ ತೆಗೆದಿಟ್ಟಿದ್ದರು. ಈ ಕಾರಣ ನಿನ್ನೆ ಸಂಜೆ ಮನೆಯಲ್ಲಿ ಯಾರು ಇಲ್ಲದಾಗ ಅರ್ಫಾರ್ಝ್ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ಅರ್ಫಾರ್ಝ್ ಮಂಗಳೂರು ಹೊರವಲಯದ ಚೆಂಬುಗುಡ್ಡೆಯ ಮಂಗಳೂರು ಒನ್ ಕಾಲೇಜಿನ ವಿದ್ಯಾರ್ಥಿ. ಮೊಬೈಲ್ ಇಲ್ಲದೇ ಮನ ನೊಂದಿದ್ದ ಅರ್ಫಾರ್ಝ್ ನಿನ್ನೆ ಬೆಳಿಗ್ಗೆ ಕಾಲೇಜಲ್ಲಿ ತಲೆ ಸುತ್ತಿ ಬಿದ್ದಿದ್ದ ಎಂದು ಹೇಳಲಾಗಿದೆ. ಈ ಕಾರಣ ಅವನಿಗೆ ತಂದೆ ಔಷದ ತಂದು ಕೊಟ್ಟಿದ್ದರು.ಸಂಜೆ ಅರ್ಫಾರ್ಝ್ ತಂಗಿಗೆ ಔಷಧಿ ತರಲೆಂದು ಹೊರ ಹೋಗಿದ್ದ ಸಂಧರ್ಭ ಹೊಸ ಎಲೆಕ್ಟ್ರಿಕ್ ವಯರ್ ತಂದು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.