Monday 29th, April 2024
canara news

`ಮೇಲ್ತೆನೆ' ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟ

Published On : 26 Nov 2017   |  Reported By : Rons Bantwal


ಮಂಗಳೂರು, ನ.26: ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ `ಮೇಲ್ತೆನೆ' ಸಂಘಟನೆಯು ಬ್ಯಾರಿ ಭಾಷಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ ಬ್ಯಾರಿ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

 Ibrahim Bathish

 Mohd Nasir

Shameema Kuttar

ಇಬ್ರಾಹೀಂ ಬಾತಿಷ್ ಅವರ `ಒರು ಮಾದಿರಿ' ಕಥೆಗೆ ಪ್ರಥಮ, ಶಮೀಮಾ ಕುತ್ತಾರ್ ಅವರ `ಅರೆ ಪಿರಾಂದ' ಕಥೆಗೆ ದ್ವಿತೀಯ, ಮುಹಮ್ಮದ್ ನಾಸಿರ್ ರೆಂಜಾಡಿ ಅವರ `ಬ್ಯಾಂಡಾತೆ ಅವ' ಕಥೆಗೆ ಮೂರನೆ ಬಹುಮಾನ ಲಭಿಸಿದೆ.

ಬ್ಯಾರಿ ಭಾಷೆ, ಸಾಹಿತ್ಯ, ಕಲೆಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡಿರುವ `ಮೇಲ್ತೆನೆ' ಸಂಘಟನೆಯು ಮೊದಲ ಬಾರಿಗೆ ಹಮ್ಮಿಕೊಂಡ ಸ್ಪರ್ಧೆಗೆ 10 ಕಥೆಗಳು ಬಂದಿದ್ದವು. ಆ ಪೈಕಿ ಕಥೆಯ ವಸ್ತು, ಸ್ವರೂಪ, ಶೈಲಿ, ನಿರೂಪಣೆ ಇತ್ಯಾದಿಯನ್ನು ಅವಲೋಕಿಸಿ 3 ಕಥೆಗಳನ್ನು ತೀರ್ಪುಗಾರರು ಬಹುಮಾನಕ್ಕೆ ಆಯ್ಕೆ ಮಾಡಿದ್ದಾರೆ.
`ಮೇಲ್ತೆನೆ' ಅಧ್ಯಕ್ಷ ಆಲಿಕುಂಞÂ ಪಾರೆಯ ಅಧ್ಯಕ್ಷತೆಯಲ್ಲಿ ಡಿ.16ರಂದು ಅಪರಾಹ್ನ 2 ಗಂಟೆಗೆ ದೇರಳಕಟ್ಟೆಯ ಆ್ಯಂಬಿಟ್ ಎಜುಕೇಶನಲ್ ಟ್ರಸ್ಟ್‍ನ ಸಭಾಂಗಣದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಟಿ. ಇಸ್ಮಾಯೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here