ಮಂಗಳೂರು, ನ.26: ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ `ಮೇಲ್ತೆನೆ' ಸಂಘಟನೆಯು ಬ್ಯಾರಿ ಭಾಷಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ ಬ್ಯಾರಿ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
Ibrahim Bathish
Mohd Nasir
Shameema Kuttar
ಇಬ್ರಾಹೀಂ ಬಾತಿಷ್ ಅವರ `ಒರು ಮಾದಿರಿ' ಕಥೆಗೆ ಪ್ರಥಮ, ಶಮೀಮಾ ಕುತ್ತಾರ್ ಅವರ `ಅರೆ ಪಿರಾಂದ' ಕಥೆಗೆ ದ್ವಿತೀಯ, ಮುಹಮ್ಮದ್ ನಾಸಿರ್ ರೆಂಜಾಡಿ ಅವರ `ಬ್ಯಾಂಡಾತೆ ಅವ' ಕಥೆಗೆ ಮೂರನೆ ಬಹುಮಾನ ಲಭಿಸಿದೆ.
ಬ್ಯಾರಿ ಭಾಷೆ, ಸಾಹಿತ್ಯ, ಕಲೆಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡಿರುವ `ಮೇಲ್ತೆನೆ' ಸಂಘಟನೆಯು ಮೊದಲ ಬಾರಿಗೆ ಹಮ್ಮಿಕೊಂಡ ಸ್ಪರ್ಧೆಗೆ 10 ಕಥೆಗಳು ಬಂದಿದ್ದವು. ಆ ಪೈಕಿ ಕಥೆಯ ವಸ್ತು, ಸ್ವರೂಪ, ಶೈಲಿ, ನಿರೂಪಣೆ ಇತ್ಯಾದಿಯನ್ನು ಅವಲೋಕಿಸಿ 3 ಕಥೆಗಳನ್ನು ತೀರ್ಪುಗಾರರು ಬಹುಮಾನಕ್ಕೆ ಆಯ್ಕೆ ಮಾಡಿದ್ದಾರೆ.
`ಮೇಲ್ತೆನೆ' ಅಧ್ಯಕ್ಷ ಆಲಿಕುಂಞÂ ಪಾರೆಯ ಅಧ್ಯಕ್ಷತೆಯಲ್ಲಿ ಡಿ.16ರಂದು ಅಪರಾಹ್ನ 2 ಗಂಟೆಗೆ ದೇರಳಕಟ್ಟೆಯ ಆ್ಯಂಬಿಟ್ ಎಜುಕೇಶನಲ್ ಟ್ರಸ್ಟ್ನ ಸಭಾಂಗಣದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಟಿ. ಇಸ್ಮಾಯೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.