ಮಂಗಳೂರು: ಮಂಗಳೂರು ಹೊರವಲಯದ ಪರಂಗಿಪೇಟೆಯಲ್ಲಿ ನಡೆದ ಎರಡು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೊರ್ವ ಆರೋಪಿಯನ್ನು ಸೋಮವಾರ ಮಂಗಳೂರು ಡಿಸಿಐಬಿ ತಂಡ ಬಂಧಿಸಿದೆ.
ಆರೋಪಿಯನ್ನು ಅಡ್ಯಾರ್ ನಿವಾಸಿ ಇಮ್ರಾನ್ ಯಾನೆ ಪಲ್ಟಿ ಇಮ್ರಾನ್ ಎಂದು ಗುರುತಿಸಲಾಗಿದೆ.ಇದೀಗ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12 ಕ್ಕೇರಿದೆ.ಮಂಗಳೂರಿನ ತೊಕ್ಕೊಟ್ಡಿನಲ್ಲಿ ಡಿಸಿಐಬಿ ಇನ್ಸ್ ಪೆಕ್ಟರ್ ಅಮಾನುಲ್ಲಾ ಮತ್ತವರ ತಂಡ ಕಾರ್ಯಾಚರಣೆ ನಡೆಸಿ ಇಮ್ರಾನ್ ನನ್ನು ಬಂಧಿಸಿದ್ದು, ಈತನನ್ನು ಬಂಟ್ವಾಳ ಎ ಎಸ್ ಪಿ ಡಾ.ಅರುಣ್ ಅವರಿಗೆ ಮುಂದಿನ ತನಿಖೆಗಾಗಿ ಹಸ್ತಾಂತರಿಸಿದ್ದಾರೆ.
ಇತ್ತೀಚೆಗೆ ಪರಂಗಿಪೇಟೆಯಲ್ಲಿ ಅಡ್ಯಾರ್ ಮತ್ತು ಕಣ್ಣೂರಿನ ತಂಡ ಎರಡು ವಾಹನದಲ್ಲಿ ಅಗಮಿಸಿ ನಡೆಸಿದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಜಿಯಾ ಮತ್ತು ಫಯಾಜ್ ಎಂಬವರಿಬ್ಬರು ಕೊಲೆಗೀಡಾಗಿದ್ದರು. ಹಾಗೆಯೇ ಅನಿಶ್, ಪೈಜಲ್ ಮತ್ತು ಮುಸ್ತಾಕ ಎಂಬವರು ಗಂಭೀರ ಗಾಯಗೊಂಡಿದ್ದರು. ಘಟನೆಗೆ ಹಳೆಯ ದ್ವೇಷ ಕಾರಣವಾಗಿತ್ತು.