ಮಂಗಳೂರು: ಮಗುವೊಂದು ಆಕಸ್ಮಿಕವಾಗಿ ಮನೆಯ ತೋಟದಲ್ಲಿರುವ ಕೆರೆಯಲ್ಲಿ ಬಿದ್ದು ಮೃತಪಟ್ಟ ಘಟನೆ ನ ಮಂಗಳವಾರದಂದು ದ.ಕ.ಜಿಲ್ಲೆಯ ಪುತ್ತೂರಿನ ಬಲ್ನಾಡುವಿನ ನಡುಮನೆಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುದರ್ಶನ್ ಮತ್ತು ಅಶ್ವಿನಿ ದಂಪತಿ ಪುತ್ರ ಶೌರ್ಯ(2) ಮೃತಪಟ್ಟ ಮಗು. ರಜೆಯಲ್ಲಿ ತನ್ನ ತಾಯಿ ಮನೆಗೆ ಬಂದಿದ್ದ ಅಶ್ವಿನಿಯವರು ಪುತ್ರ ಶೌರ್ಯನನ್ನು ಅಜ್ಜ ಅಜ್ಜಿಯೊಂದಿಗೆ ಬಿಟ್ಟು ತೆರಳಿದ್ದರು. ಆದರೆ, ಶೌರ್ಯನನ್ನು ಆತನ ಅಜ್ಜ ತೋಟದಲ್ಲಿ ಸುತ್ತಾಡಿಸಿ ಮನೆಯಲ್ಲಿ ಬಿಟ್ಟು ಮತ್ತೆ ತೋಟದ ಕೆಲಸಕ್ಕೆಂದು ಹಿಂತಿರುಗಿದ್ದರು.ಆದರೆ, ಇದೇ ವೇಳೆ ಶೌರ್ಯ ಮತ್ತೆ ಅಜ್ಜನ್ನು ಹಿಂಬಾಲಿಸಿ ಹೋಗಿ ಕೆರೆಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.