ಮಂಗಳೂರು: ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳಿದ್ದ ಸರಕು ಸಾಗಣಿಕೆಯ ನೌಕೆಗಳು ಓಖಿ ಚಂಡಮಾರುತದ ಹೊಡೆತಕ್ಕೆ ಸಿಲುಕಿವೆ. ಈ ಪೈಕಿ ಲಕ್ಷದ್ವೀಪ ಸಮೀಪ ಎರಡು ನೌಕೆಗಳು ಮುಳುಗಡೆಯಾಗಿದ್ದು 1 ನೌಕೆ ಹಾನಿಗೊಂಡಿದೆ.ಮಂಗಳೂರು ಹಳೆ ಬಂದರಿನಿಂದ ಗುರುವಾರ ಸಿಮೆಂಟ್ ಹಾಗು ಜಲ್ಲಿಕಲ್ಲುಗಳನ್ನು ಹೊತ್ತು ಲಕ್ಷದ್ವೀಪಕ್ಕೆ ಮಂಜಿ ನೌಕೆಗಳು ತೆರಳಿದ್ದವು.
ಮುಳುಗಡೆಗೊಂಡ ಎರಡು ಮಂಜಿ ನೌಕೆಯಲ್ಲಿ ಒಟ್ಟು14 ಸಿಬ್ಬಂದಿಗಳಿದ್ದರು. ಅಪಾಯದಲ್ಲಿದ್ದ ಎಲ್ಲಾ ಸಿಬ್ಬಂದಿಗಳನ್ನು ಸ್ಥಳೀಯ ಮೀನುಗಾರರು ಹಾಗೂ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.ಈ ನಡುವೆ ಹಿಂದೂ ಮಹಾಸಾಗರದಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವ ಕರ್ನಾಟಕದ ಕರಾವಳಿಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ.ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.