ಮುಂಬಯಿ, ಡಿ.03: ದಾದರ್ ಪೂರ್ವದ ಟಿಟಿ ಅಲ್ಲಿನ ಡಾ| ಗಂತಿ ರೋಡ್ನ ವಿಮಲ್ ಸ್ಮೃತಿ ನಿವಾಸಿ ಯೋಗೇಶ್ ಸೂರು ಪೂಜಾರಿ ವಡಾಲ (52.) ಅವರು ಇಂದಿಲ್ಲಿ ರವಿವಾರ ತೀವ್ರ ಹೃದಯಾಘಾತದಿಂದ ಸಯಾನ್ ಅಲ್ಲಿನ ಸೋಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಉಡುಪಿ ಜಿಲ್ಲೆಯ ನಂದಿಕೂರು ನಿವಾಸಿ ಆಗಿದ್ದ ಯೋಗೇಶ್ ವಡಲಾದಲ್ಲಿ ಸುಯೋಗ್ ಬಾರ್ ಎಂಡ್ ರೆಸ್ಟೋರೆಂಟ್, ಸಾಯಿನಾಥ್ ರೆಸ್ಟೋರೆಂಟ್, ವೈನ್ಸ್ ಇತ್ಯಾದಿಗಳ ಮಾಲೀಕರಾಗಿ ಕೊಡುಗೈದಾನಿ ಆಗಿದ್ದು ತೆರೆಮರೆಯಲ್ಲಿದ್ದೇ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿ ಜನಾನುರಾಗಿದ್ದರು.
ಮೃಯರು ಪತ್ನಿ, ಎರಡು ಗಂಡು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ಯೋಗೇಶ್ ನಿಧನಕ್ಕೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಮಾಜಿ ಅಧ್ಯಕ್ಷ ಎಲ್.ವಿ ಅಮೀನ್, ಭಾರತ್ ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲ್ಯಾನ್, ಸಿಎ| ಅಶ್ವಜಿತ್ ಹೆಜ್ಮಾಡಿ, ಮೋಹನ್ದಾಸ್ ಹೆಜ್ಮಾಡಿ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ನೂರಾರು ಗಣ್ಯರ ಅಂತಿಮದರ್ಸನದೊಂದಿಗೆ ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ದಾದರ್ ಪೂರ್ವದ ಬೋಯಿವಾಡ ಇಲ್ಲಿನ ರುಧ್ರಭೂಮಿಯಲ್ಲಿ ನೆರವೇರಿಸಲಾಯಿತು.