ಮಂಗಳೂರು : '2018ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ' ಎಂದು ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.ಮಂಗಳೂರಿನಲ್ಲಿ ಮಾತನಾಡಿದ ವೀರಪ್ಪ ಮೊಯ್ಲಿ ಅವರು, 'ಕರಡು ಪ್ರಣಾಳಿಕೆ ಸಮಿತಿಯ ಮೊದಲ ಸಭೆಯಲ್ಲಿ 15 ಉಪ ಸಮಿತಿಗಳನ್ನು ರಚನೆ ಮಾಡಲಾಗಿದೆ.
ಈ ಸಮಿತಿಗಳು ತಮ್ಮ ಭಾಗದ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಯಾವ ವಿಷಯವನ್ನು ಪ್ರಣಾಳಿಕೆಯನ್ನು ಸೇರಿಸಬೇಕು ಎಂಬುದನ್ನು ಸಮಿತಿಗೆ ವರದಿ ರೂಪದಲ್ಲಿ ನೀಡಲಿವೆ' ಎಂದರು.'ಪ್ರತಿ ವಲಯಕ್ಕೆ ಕರಡು ಸಮಿತಿ ಭೇಟಿ ನೀಡಿ ಸಮಾಲೋಚನೆ ನಡೆಸುತ್ತಿದೆ. ಪ್ರಣಾಳಿಕೆ ರಚನೆಯಲ್ಲಿ ಪಕ್ಷದ ಸಿದ್ಧತೆ ಒಂದು ಕಡೆಯಾದರೆ ರಾಜ್ಯ ಸರ್ಕಾರದಿಂದ ಸಿದ್ದರಾಮಯ್ಯ ಸೂಚನೆಯಂತೆ 'ನವ ಕರ್ನಾಟಕ 2025' ವಿಷನ್ ಡಾಕ್ಯುಮೆಂಟ್' ತಯಾರಿಸಲಾಗಿದೆ' ಎಂದು ಮೊಯ್ಲಿ ವಿವರಿಸಿದರು.