ಮಂಗಳೂರು:ಬಸ್ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟು 10ಕ್ಕೂ ಅಧಿಕ ಜನ ಗಾಯಗೊಂಡ ಘಟನೆ ಹಾಸನದ ಆಲೂರು ತಾಲೂಕಿನ ಹೆದ್ದುರ್ಗೆ ಗ್ರಾಮದಲ್ಲಿ ಡಿ. 5 ರ ಮಂಗಳವಾರ ಸುಮಾರು ನಸುಕಿನ ಜಾವ 3.30ಕ್ಕೆ ನಡೆದಿದೆ.ಫಾತಿಮಾ ಸಮೀರಾ(27) , ಯಶೋದಾ ಮೃತಪಟ್ಟ ದುರ್ದೈವಿಗಳು. ಇವರಲ್ಲಿ ಚೆಂಗಳದ ಫಾತಿಮಾ ಸಮೀರಾ ಬೆಂಗಳೂರಿನ ಟಾಟಾ ಕಂಪನಿಯಲ್ಲಿ ಇಂಜಿನಿಯರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದರು.ಕೆಎಸ್ಆರ್ಟಿಸಿ ವೋಲ್ವೊ ಬಸ್ ಹಾಗೂ ದುರ್ಗಾಂಬ ಬಸ್ಗಳ ನಡುವೆ ಈ ಅಪಘಾತ ಸಂಭವಿಸಿದೆ.
ಗ್ರಾಮ ಪಂಚಾಯತ್ ಸದಸ್ಯರಾದ ಚೆಂಗಳದ ಅಬ್ದುಲ್ ಸಲಾಂ(57), ಕದ್ರಿಯ ವಿದ್ಯಾ (50) ಪುತ್ತೂರು ಕಬಕದ ರವಿಕುಮಾರ್ (33) , ಬೊಮ್ಮಬೆಟ್ಟದ ನವೀನ್ ಪ್ರಕಾಶ್ (35), ಅತ್ತಾವರದ ಶಾನನ್(21). ಬೆಂಗಳೂರು ಮಲ್ಲೇಶ್ವರದ ನಾರಯಣ (40) ಇವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಆಲೂರು ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.