ಮಂಗಳೂರು: ಪ್ರಧಾನಿ ಮೋದಿಯ ಶಿಷ್ಯರು ದೇವರು, ದೇಶಪ್ರೇಮ ಎನ್ನುತ್ತಾ ಧರ್ಮದ ಮೂಲಕ ಹಿಂಸಾಚಾರ ಮಾಡುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಿಡಿ ಕಾರಿದ್ದಾರೆ.
ಮಂಗಳೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಸಚಿವರು, ಮೋದಿ ಧರ್ಮದ ಮೂಲಕ ಹಿಂಸಾಚಾರ ಮಾಡಬೇಡಿ ಎಂದು ದೇಶವ್ಯಾಪಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಅವರ ಶಿಷ್ಯರು ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುತ್ತಿದ್ದಾರೆ ಎಂದು ಹೇಳಿದರು.ಹನುಮಜಯಂತಿ ಆಚರಣೆಯ ವೇಳೆ ಸಂಸದರು ಸರಕಾರದ ಅಧಿಕೃತ ವಾಹನವನ್ನು ಚಾಲಕನ ಬದಲು ತಾನೇ ಖುದ್ಧಾಗಿ ಚಲಾಯಿಸಿದ್ದಾರೆ.
ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಬ್ಯಾರಿಕೇಡ್ ಮುರಿದು ವಾಹನವನ್ನು ಚಲಾಯಿಸಿಕೊಂಡು ಹೋಗಿರುವುದು ದೊಡ್ಡ ಅಪರಾಧ ಎಂದು ಸಚಿವರು ಹೇಳಿದರು.