ಕುಂದಾಪುರ, ಡಿ. 16: ‘ಎಳೆವೆಯಿಂದಲೇ ಮಕ್ಕಳಲ್ಲಿ ಕ್ರೀಡೆಗಳಲ್ಲಿ ಆಸಕ್ತಿ ಹೊಮ್ಮಲು ರೋಜರಿ ಕಿನ್ನರ್ ಗಾರ್ಟನ್ ಶಾಲೆಯ, ಎಲ್.ಕೆ.ಜಿ, ಯು.ಕೆ.ಜಿ. ಹಾಗೂ ನರ್ಸರಿ ಮಕ್ಕಳು ಮತ್ತು ಹೆತ್ತವರಿಗಾಗಿ ಕ್ರಿಡೋತ್ಸವನ್ನು ರೋಜರಿ ಚರ್ಚ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕ್ರಿಡೋತ್ಸವವನ್ನು ಕ್ರಾಸ್ಟೊ ಇಂಜಿನಿಯರ್ ಪಾಲುದಾರ ವಿನೋದ್ ಕ್ರಾಸ್ಟೊ ಉದ್ಘಾಟಿಸಿ ಶುಭ ಕೋರಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲೆಯ ವ್ಯವಸ್ಥಾಪಕರಾದ ರೋಜರಿ ಇಗರ್ಜಿಯ ಪ್ರಧಾನ ಧರ್ಮಗುರು ವಂ| ಅನಿಲ್ ಡಿಸೋಜಾ ‘‘ಎಳೆವೆಯಿಂದಲೇ ಮಕ್ಕಳಲ್ಲಿ ಆಟ ಮತ್ತು ಪಾಠಗಳಲ್ಲಿ ಆಸಕ್ತಿ ಹೊಮ್ಮಲು ಕೋಲಿ ರೋಜರಿ ಕಿನ್ನರ್ ಗಾರ್ಟನ್ ಶಾಲೆ ಶ್ರಮಿಸುತ್ತದೆ’ ಎಂದು ಈ ಕ್ರಿಡೋತ್ಸವವನ್ನು ಹಮ್ಮಿಕೊಂಡಿದ್ದೆವೆ ಶುಭ ಕೋರಿದರು. ಸಹಯಕ ಧರ್ಮಗುರು ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಉಪಸ್ಥಿತರಿದ್ದರು.
ಶಿಕ್ಷಕಿ ಆನ್ನಾ ಡಿಸೋಜಾ ಸ್ವಾಗತಿಸಿದರು. ಶಿಕ್ಷಕಿ ವೀಣಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಮುಖ್ಯೊಪಾಧ್ಯಾನಿ ಶೈಲಾ ಲೂವಿಸ್ ವಂದಿಸಿದರು. ದೈಹಿಕ ಶಿಕ್ಷಕ ಚಂದ್ರಶೇಖರ್ ಆಟೋಟ ಸ್ಪರ್ಧೆಗಳನ್ನು ನೆಡೆಸಿಕೊಟ್ಟರು..