ಮಂಗಳೂರು: ರಿಕ್ಷಾ ಟೆಂಪೋದಲ್ಲಿ ಕರು ಸಾಗಾಟ ಮಾಡುತ್ತಿದ್ದ ಸಂದರ್ಭ ಇಬ್ಬರ ಮೇಲೆ 30 ಜನರ ತಂಡವೊಂದು ಹಲ್ಲೆ ನಡೆಸಿ ದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆಯಲ್ಲಿ ನಡೆದಿದೆ. ಅಲ್ಲಿಪಾದೆಯ ಪೂವಪ್ಪ ಪೂಜಾರಿ ಅವರ ಮನೆಯ ಸಮೀಪದ ಸಯ್ಯತ್ ಇಬ್ರಾಹಿಂ ಅವರ ರಿಕ್ಷಾದಲ್ಲಿ ಕರುವನ್ನು ಮನೆಗೆ ಸಾಕಲು ಡಿ 21 ರ ಬುಧವಾರ ರಾತ್ರಿ ಸುಮಾರು ಹತ್ತು ಘಂಟೆಯ ವೇಳೆ ಕೊಂಡು ಹೋಗುತ್ತಿದ್ದ ವೇಳೆ ಸುಮಾರು ೩೦ರಿಂದ ೪೦ ಜನರ ತಂಡ ಹಲ್ಲೆ ನಡೆಸಿದೆ.ಈ ಸಂದರ್ಭ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ಸಂದರ್ಭ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಲಘು ಲಾಠಿ ಪ್ರಹಾರ ನಡೆಸಿದರು. ಬಳಿಕ ಸ್ಥಳದಲ್ಲಿದ್ದ ಹಲವಾರು ವಾಹನಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.