ಉಜಿರೆ: ಶ್ರವಣಬೆಳಗೊಳದಲ್ಲಿ 2018ರ ಫೆಬ್ರವರಿ 17 ರಿಂದ 25ರ ವರೆಗೆ ನಡೆಯಲಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾ ಮಸ್ತಕಾಭಿಷೇಕದ ಪ್ರಚಾರ ಹಾಗೂ ಧರ್ಮ ಪ್ರಭಾವನೆಗಾಗಿ ರಾಜ್ಯದೆಲ್ಲೆಡೆ ಸಂಚರಿಸುವ ಪ್ರಭಾವನಾ ರಥ ಮಂಗಳವಾರ ಧರ್ಮಸ್ಥಳಕ್ಕೆ ಬಂದಾಗ ಭವ್ಯ ಸ್ವಾಗತ ಕೋರಲಾಯಿತು.
ರಥವು ಬುಧವಾರ ಬೆಳ್ತಂಗಡಿ, ವೇಣೂರು ಮೂಲಕ ಮೂಡಬಿದ್ರೆಗೆ ಹೋಗಿ ಅಲ್ಲಿ ತಂಗುತ್ತದೆ. ಗುರುವಾರ ಮಂಗಳೂರು ಬಂದರಿನಲ್ಲಿರುವ ಜೈನ ಬಸದಿಯಲ್ಲಿ ವಿಶೇಷ ಕಾರ್ಯಕ್ರಮವಿದೆ. ಶುಕ್ರವಾರ ಮಂಗಳೂರಿನಿಂದ ಹಾಸನಕ್ಕೆ ರಥ ವಿಹಾರ ಮಾಡಲಿದೆ ಎಂದು ರಥ ಯಾತ್ರೆಯ ಸಂಯೋಜಕ ಧರಣೇಂದ್ರ ಜೈನ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಧರಣೇಂದ್ರ ಜೈನ್. ಮೊಬೈಲ್ : 9448413749