ಮಂಗಳೂರು: ಮಂಗಳೂರು ನಗರದ ಕುಂಟಿಕಾನ ಸಮೀಪದ ಬಿ.ಎಂ.ಎಸ್ ಹೊಟೇಲ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಯುವಕನೋರ್ವ ಮೃತಪಟ್ಟ ದಾರುಣ ಘಟನೆ ನಡೆದಿದೆ.ಮೃತಪಟ್ಟವರನ್ನು ಬೊಂದೆಲ್ ನಿವಾಸಿ ಇಯಾನ್ ಮಸ್ಕರೇನಸ್ (27) ಎಂದು ಗುರುತಿಸಲಾಗಿದೆ.
ಕುಂಟಿಕಾನದ ರಾಷ್ಟ್ರೀಯ ಹೆದ್ಧಾರಿ ಸಮೀಪ ಈ ಅಪಘಾತ ನಡೆದಿದ್ದು, ನಿನ್ನೆ ರಾತ್ರಿ ಇಯಾನ್ ಮಸ್ಕರೇನಸ್ ನಾಲ್ಕು ಗೆಳೆಯರ ಜೊತೆಗೆ ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದೆ. ತಕ್ಷಣ ಇಯಾನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.