(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಜ.26: ಮಹಾರಾಷ್ಟ್ರದ ಅಯೋಧ್ಯೆ ಪ್ರಸಿದ್ಧಿಯ ವಡಲಾ ಅಲ್ಲಿನ ದ್ವಾರಕಾನಾಥಭವನದ ಶ್ರೀರಾಮ ಮಂದಿರದ ಪ್ರತಿಷ್ಠಾ ವರ್ಧಂತಿ ಉತ್ಸವವು ಇಂದಿಲ್ಲಿ ಧಾರ್ಮಿಕ ಪೂಜಾಧಿಗಳೊಂದಿಗೆ ವಿಧಿವತ್ತಾಗಿ ನೆರವೇರಿಸಲ್ಪಟ್ಟಿತು.ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಗೋವಾ ಇದರ ಮಠಾಧೀಶ, ಪರ್ತಗಾಳಿ ಜಿವೋತ್ತಮ ಮಠದ ಮಹಾಧಿಪತಿ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ್ ವಡೇರ್ ಸ್ವಾಮೀಜಿ ಅವರು ತಮ್ಮ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರನ್ನೊಳಗೊಂಡು ಶ್ರೀ ರಾಮಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀರಾಮಚಂದ್ರ ದೇವರಿಗೆ ಪೂಜೆ ನೆರವೇರಿಸಿದರು.
ಮಂದಿರದ ಪ್ರಧಾನ ಅರ್ಚಕ ಶ್ರೀ ಸುಧಾಮ ಅನಂತ ಭಟ್ ತಮ್ಮ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ, ಸಂಪ್ರದಾಯಿಕ ಪೂಜಾಧಿಗಳÀನ್ನು ನೆರವೇರಿಸಿ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಮಂದಿರ ಮುಂಬಯಿ ಸಮಿತಿ ಕಾರ್ಯಾಧ್ಯಕ್ಷ ಗೋವಿಂದ ಎಸ್.ಭಟ್, ಜಿಎಸ್ಬಿ ಗಣೇಶೋತ್ಸವ ಉತ್ಸವ ಸಮಿತಿ ಅಧ್ಯಕ್ಷ ಉಲ್ಲಾಸ್ ಡಿ.ಕಾಮತ್, ಕಾರ್ಯಾಧ್ಯಕ್ಷ ಎನ್.ಎನ್ ಪಾಲ್, ಮುಕುಂದ್ ಕಾಮತ್, ಅಮುಲ್ ಪೈ, ಉಮೇಶ್ ಪೈ, ಕಮಲಾಕ್ಷ ಗಿ.ಸರಾಫ್, ಮತ್ತಿತರ ಪದಾಧಿಕಾರುಗಳು ಸೇರಿದಂತೆ ರಾಮ ಸೇವಾಕರ್ತರು, ಮಹಿಳಾ ಮಂಡಳಿ, ನೂರಾರು ಭಕ್ತರು ಉಪಸ್ಥಿತರಿದ್ದರು.