ನಲ್ವತ್ತ ನಾಲ್ಕನೇ ವಾರ್ಷಿಕ ಶ್ರೀ ಬೈದರ್ಕಳ ನೇಮೋತ್ಸವ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.27: ಬೋರಿವಿಲಿ ಪೂರ್ವದ ದೇವುಲಪಾಡಾದಲ್ಲಿ ತುಳುನಾಡ ವೀರರಾದ ಕೋಟಿ ಚೆನ್ನಯರನ್ನು ಒಳಗೂಡಿಕೊಂಡಿರುವ ಓಂ ಶ್ರೀ ಜಗಧೀಶ್ವರೀ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಇಂದಿಲ್ಲಿ ಶುಕ್ರವಾರ ರಾತ್ರಿ 44ನೇ ವಾರ್ಷಿಕ ಬೈದರ್ಕಳ ನೇಮೋತ್ಸವವನ್ನು ಕ್ಷೇತ್ರÀದ ಸೇವಾ ಸಮಿತಿ ಅಧ್ಯಕ್ಷ ಶೇಖರ್ ಇಂದು ಸಾಲಿಯಾನ್ ಕಟಪಾಡಿ ನೇತೃತ್ವದಲ್ಲಿ ನಡೆಸಲ್ಪಟ್ಟಿತು.
ಆ ಪ್ರಯುಕ್ತ ಅಶ್ವತ್ತದಡಿ ಗರಡಿಯಲ್ಲಿ ಕಲಶ ಪ್ರತಿಷ್ಠೆ, ರಾತ್ರಿ ಅಗೆಲ ತಂಬಿಲ, ಬೈದರ್ಕಳ ದರ್ಶನದೊಂದಿಗೆ ವಾರ್ಷಿಕ ನೇಮೋತ್ಸಕ್ಕೆ ಚಾಲನೆ ನೀಡಲಾಗಿದ್ದು ಇಂದಿಲ್ಲಿ ಗುರುವಾರ ಬೆಳಿಗ್ಗೆ ಗರಡಿಯಲ್ಲಿ ಗಣಹೋಮ, ದುರ್ಗಾಪೂಜೆ, ರಾತ್ರಿ ಬೈದರ್ಕಳ ನೇಮ (ಕೋಲ), ಜೋಗಿ ಪುರುಷರ ನೇಮೋತ್ಸವÀ ಮತ್ತು ಮಾಯಂದಳ್ ನೇಮ ನಡೆಸಲ್ಪಟ್ಟಿತು. ಸುಕುಮಾರ್ ಭಟ್ ಬೈಕಲ ತನ್ನ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ನೆರೆದ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು.
ನೇಮೋತ್ಸವದಲ್ಲಿ ಪ್ರಸಾದ್ ಕಲ್ಯ (ಮುಲುಂಡ್) ದೇವಿಪಾತ್ರಿಯಾಗಿ, ನರ್ಸಪ್ಪ ಕೆ.ಮಾರ್ನಾಡ್ ಮಧ್ಯಾಸ್ಥರಾಗಿ, ಬೂಬ ಪರವ, ನರಸಿಂಹ ಪರವ ಮತ್ತು ಗುಂಡು ಪರವ ಕೋಲ ನೇರವೇರಿಸಿದರು. ಸೂಡಾ ಗರಡಿಯ ಕೋಟಿ ಪೂಜಾರಿ ಮತ್ತು ಸತೀಶ್ ಪೂಜಾರಿ ಪಕ್ಕಿಬೆಟ್ಟು ಬೈದರ್ಕಳರ ಪೂಜಾರಿಗಳಾಗಿ, ಸೂಡಾ ಗರಡಿಯ ಸತೀಶ್ ಮಡಿವಾಳ ದೀವಾಟಿಕೆಯ, ವಸಂತ ಪೂಜಾರಿ ಬೇಲಾಡಿ ಹೂವು ಮುಕ್ಕಾಲ್ದಿಯಾಗಿ ಸೇವೆಗೈದರು. ಮುಂಜಾನೆ ಮಂಗಳದೊಂದಿಗೆ ವಾರ್ಷಿಕ ನೇಮೋತ್ಸವ ಸಮಾಪ್ತಿ ಗೊಂಡಿತು.
ವಾರ್ಷಿಕ ನೇಮೋತ್ಸವದಲ್ಲಿ ಭಾರತ್ ಬ್ಯಾಂಕ್ನ ನಿರ್ದೇಶಕರುಗಳಾದ ದಾಮೋದರ ಸಿ.ಕುಂದರ್, ಗಂಗಾಧರ್ ಜೆ.ಪೂಜಾರಿ, ಮಾಜಿ ನಿರ್ದೇಶಕ ಶಂಕರ್ ಡಿ.ಪೂಜಾರಿ, ಪ್ರೇಮನಾಥ್ ಪಿ.ಕೋಟ್ಯಾನ್, ಆನಂದ್ ಪೂಜಾರಿ, ಅನಿಲ್ ಸಾಲ್ಯಾನ್, ಮೋಹನ್ ಎಂ.ಅವಿೂನ್, ಸ್ಥಾನೀಯ ನಗರ ಸೇವಕ ಯೋಗೇಶ್ ಬೊಯಿರ್, ರಂಗಕರ್ಮಿ ಕರುಣಾಕರ್ ಕಾಪು, ಕೊರಿಯೋಗ್ರಾಫರ್ ಸನ್ನಿಧ್ ಪೂಜಾರಿ ಸೇರಿದಂತೆ ಮಹಾನಗರದ ನೂರಾರು ಭಕ್ತಾಧಿಗಳು ಆಗಮಿಸಿ ಶ್ರೀ ಜಗಧೀಶ್ವರಿ ಮತ್ತು ಬ್ರಹ್ಮ ಬೈದರ್ಕಳರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷ ಲಕ್ಷ ್ಮಣ ಬಿ.ಬೆಳುವಾಯಿ, ಗೌ| ಕೋಶಾಧಿಕಾರಿ ರಘು ಕೆ.ಕೋಟ್ಯಾನ್, ಜೊತೆ ಕಾರ್ಯದರ್ಶಿ ಸದಾಶಿವ ಡಿ.ಸಾಲ್ಯಾನ್, ಜೊತೆ ಕೋಶಾಧಿಕಾರಿ ದಿನೇಶ್ ಆರ್.ಶೆಟ್ಟಿ, ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ನರ್ಸಪ್ಪ ಕೆ.ಮಾರ್ನಾಡ್, ಕಾರ್ಯದರ್ಶಿ ಜಯರಾಮ ಎಸ್.ಪೂಜಾರಿ, ಟ್ರಸ್ಟಿಗಳಾದ, ವಾಸು ಕೆ.ಪೂಜಾರಿ, ಜಯರಾಮ ಎಸ್.ಪೂಜಾರಿ, ಆನಂದ್ ಜಿ.ಶೆಟ್ಟಿ, ದಿನಕರ್ ಜಿ.ಪವಾರ್, ಕಾರ್ಯಕಾರಿ ಸಮಿತಿ ಅಧ್ಯಕ್ಷ ದಯಾನಂದ ಪೂಜಾರಿ ವಾರಂಗ, ಕಾರ್ಯದರ್ಶಿ ಜಯರಾಮ ಪೂಜಾರಿ, ಜೊತೆ ಕಾರ್ಯದರ್ಶಿ ವಿಠಲ ಹೆಚ್.ಪೂಜಾರಿ, ಸದಸ್ಯರುಗಳಾದ ಶ್ರೀನಿವಾಸ ಪೂಜಾರಿ, ಗಣೇಶ್ ಆರ್.ಸುವರ್ಣ, ರಘು ಎಂ.ಬಂಗೇರ, ರಮೇಶ್ ಡಿ.ಕೋಟ್ಯಾನ್, ಮಹಾಬಲ ಉದ್ಯಾವರ, ದಾಮೋದರ ಪುತ್ರನ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸೇವಾದಳವು ದಳಪತಿ ಗಣೇಶ್ ಕೆ.ಪೂಜಾರಿ ನೇತೃತ್ವದಲ್ಲಿ ಸ್ವಯಂಸೇವೆಗೈಯುತು. ಅಧ್ಯಕ್ಷ ಶೇಖರ್ ಇಂದು ಸಾಲಿಯಾನ್ ಸುಖಾಗಮನ ಬಯಸಿ ಪುಷ್ಪಗುಪ್ಚ, ಪ್ರಸಾದ ನೀಡಿದರು. ಸಮಿತಿ ಗೌ| ಪ್ರ| ಕಾರ್ಯದರ್ಶಿ ವಿಶ್ವನಾಥ ಬಿ.ಬಂಗೇರ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.