ಮುಂಬಯಿ, ಜ.31: ಕುಂದಾಪುರ ತಾಲೂಕು ಬಡಾಕೆರೆ ಗ್ರಾಮದ ಪರಮೇಶ್ವರ ಪೂಜಾರಿ (77.) ಅವರು ತನ್ನ `ಹನಿಯಡಿ ಮನೆ'ಯ ಸ್ವನಿವಾಸದಲ್ಲಿ ಕಳೆದ (ಜ.25) ಗುರುವಾರ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪ್ರಗತಿಪರ ಕೃಷಿಕರು ಆಗಿದ್ದು, ಹೆಮ್ಮಾಡಿ ಮಾರ್ತೆದಾರರ ಸಹಕಾರಿ ಸಂಘದಲ್ಲಿ ಮಾಜಿ ನಿರ್ದೇಶಕರಾಗಿದ್ದರು. ಮೃತರು ಪತ್ನಿ, ಐದು ಗಂಡು, ಎರಡು ಹೆಣ್ಣು, ಮುಂಬಯಿ ಕನ್ನಡ ಸಂಘದ ಗೌರವ ಕೋಶಾಧಿಕಾರಿ ಸುಧಾಕರ ಸಿ.ಪೂಜಾರಿ (ಸಹೋದರ) ಸೇರಿದಂತೆ ಬಂಧು ಬಳಗ ಅಗಲಿದ್ದಾರೆ.