Friday 3rd, May 2024
canara news

ಶ್ರೀ ರಜಕ ಸಂಘ ಮುಂಬಯಿ-ನವಿಮುಂಬಯಿ ಪ್ರಾದೇಶಿಕ ಸಮಿತಿ ಆಚರಿಸಿದ ರಜಕೋತ್ಸವ

Published On : 01 Feb 2018   |  Reported By : Rons Bantwal


ಮುಂಬಯಿ, : ಶ್ರೀ ರಜಕ ಸಂಘ ಮುಂಬಯಿ ಅಧ್ಯಕ್ಷ ಸತೀಶ್ ಎಸ್.ಸಾಲಿಯಾನ್ ಅಧ್ಯಕ್ಷತೆಯಲ್ಲಿ ನವಿ ಮುಂಬಯಿ ಪ್ರಾದೇಶಿಕ ಸಮಿತಿಯು ಕಳೆದ ಭಾನುವಾರ ಸಂಜೆ ನವಿ ಮುಂಬಯಿ ಐರೋಲಿ ಅಲ್ಲಿನ ಜೆವಿಎಂ ಮೆಹ್ತಾ ಕಾಲೇಜು ಸಭಾಗೃಹದಲ್ಲಿ ರಜಕೋತ್ಸವ ಸಂಭ್ರಮಿಸಿತು.

ಉತ್ಸಹದಲ್ಲಿ ಮುಖ್ಯ ಅತಿಥಿüಯಾಗಿ ಐರೋಲಿಯ ನ್ಯೂ ಲೈಫ್ ಲೈನ್ ಹಾಸ್ಪಿಟಲ್‍ನ ಡಾ| ರಾಜು ಮುರುಡ್ಕÀರ್, ಗೌರವ ಅತಿಥಿsಗಳಾಗಿ ನವಿಮುಂಬಯಿ ಮಹಾನಗರ ಪಾಲಿಕೆಯ ನಗರಸೇವಕ ಮನೋಹರ ಮಡ್ವಿ, ರಿಬ್ಬನ್ಸ್ ಎಂಡ್ ಬಲೂನ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಸತೀಶ್ ಕೆ.ಶೆಟ್ಟಿ, ಪುಣೆಯ ಉದ್ಯಮಿ ಕೆ.ಗಣೇಶ್ ಕುಮಾರ್ ಹಾಗೂ ಉಪಾಧ್ಯಕ್ಷ ದಾಸು ಸಿ.ಸಾಲ್ಯಾನ್, ಕಾರ್ಯದರ್ಶಿ ಸುಮಿತ್ರಾ ಆರ್.ಪಲಿಮಾರ್, ಸಂಘದ ನವಿ ಮುಂಬಯಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಜಯ ಮಡಿವಾಳ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೊತೆ ಕಾರ್ಯದರ್ಶಿ ಕಿರಣ್ ಕುಂದರ್, ಜೊತೆ ಕೋಶಾಧಿಕಾರಿಗಳಾದ ಸಿಎ| ವಿಜಯ್ ಕುಂದರ್, ಸುಭಾಷ್ ಸಾಲ್ಯಾನ್, ಸಂಘದ ಮಹಿಳಾ ವಿಭಾಧ್ಯಕ್ಷೆ ಸರೋಜಿನಿ ಡಿ.ಗುಜರನ್, ಯುವ ವಿಭಾಗಧ್ಯಕ್ಷ ಮನೀಷ್ ಎ.ಕುಂದರ್, ಕಾರ್ಯಕಾರಿ ಸಮಿತಿ ಸದಸ್ಯ ಶಶಾಂಕ್ ಸಾಲ್ಯಾನ್, ಪ್ರಕಾಶ್ ಗುಜರನ್, ಸಾಂಸ್ಕೃತಿಕ ವಿಭಾಗದ ಉಪ ಕಾರ್ಯಾಧ್ಯಕ್ಷ ಭಾಸ್ಕರ್ ಕುಂದರ್, ನವಿಮುಂಬಯಿ ಸಮಿತಿ ಗೌರವಾಧ್ಯಕ್ಷ ನಾರಾಯಣ ಕುಂದರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಹೇಮಾ ಕೆ.ಕುಂದರ್, ಯುವ ವಿಭಾಗದ ಕಾರ್ಯಾಧ್ಯಕ್ಷೆ ಕು| ಪ್ರಮೀಳಾ ಸಾಲ್ಯಾನ್ ಸಾರಥ್ಯದಲ್ಲಿ ಜರುಗಿಸಲ್ಪಟ್ಟ ರಜಕೋತ್ಸವದಲ್ಲಿ ರಜಕ ಬಾಂಧವರು ಬಹುಸಂಖ್ಯೆಯಲ್ಲಿ ಉತ್ಸಹದಲ್ಲಿ ಪಾಲ್ಗೊಂಡು ಯಶಸ್ಸಿಗೆ ಪಾತ್ರರಾದರು.

ಗೀತಾ ಎನ್.ಕುಂದರ್ ಮತ್ತು ಕು| ಸಾಕ್ಷಿ ಎಸ್.ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಉಪ ಕಾರ್ಯಾಧ್ಯಕ್ಷ ಹರೀಶ್ ಯು.ಸಾಲ್ಯಾನ್, ರಮೇಶ್ ಮಡಿವಾಳ, ಲತಿಕಾ ಸಲ್ಯಾನ್, ಕು| ರೋಶ್ನಿ ಬಂಗೇರಾ ಅತಿಥಿüಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಪ್ರದೀಪ್ ಕುಮಾರ್ ವಂದಿಸಿದರು. ಉತ್ಸಹದ ಅಂಗವಾಗಿ ಸದಸ್ಯರು ಮತ್ತು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ, ಮಡಿವಾಳ ಮಾಚೀ ಮಹಾತ್ಮೆ ನೃತ್ಯವೈಭವ ಸಂಗೀತ ಸಂಜೆ ಪ್ರಸ್ತುತ ಪಡಿಸಿದರು.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here