ಇಂದು ಮಂಡನೆಯಾದ ಕೇಂದ್ರ ಸರಕಾರದ ಬಜೆಟ್ ರೈತರ, ಬಡ ಮಧ್ಯಮ ವರ್ಗದ ಹಾಗೂ ಯುವಜನರ ವಿರೋಧಿಯಾಗಿದೆ. ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಯ ಆಶ್ವಾಸನೆ ನೀಡಿದ್ದ ಇವರು ಇದೀಗ ಬಜೆಟ್ನಲ್ಲಿ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಯಾವುದೇ ಯೋಜನೆ ಘೋಷಿಸಿಲ್ಲ. ಆದರೆ ಇತ್ತೀಚೆಗಷ್ಟೆ ಪ್ರಧಾನಿಯವರು ಪಕೋಡಾ ಮಾರಿ ಇನ್ನೂರು ರೂ. ಸಂಪಾದಿಸಬಹುದು ಎಂದು ಹೇಳಿದ್ದರು.
ಈ 4 ವರ್ಷಗಳಲ್ಲಿ ಉದ್ಯಮಿಗಳ 1,80,000 ಕೋಟಿ ರೂ. ಸಾಲ ಮನ್ನಾ ಮಾಡಿದ್ದ ಈ ಸರಕಾರ ರೈತರ ಅಲ್ಪಾವಧಿ ಸಾಲ ಮನ್ನಾ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಆ ಕುರಿತು ಚಕಾರವನ್ನೂ ಎತ್ತಿಲ್ಲ. ಆದರೆ ಮನಮೋಹನ್ ಸಿಂಗ್ ಸರಕಾರ ರೈತರ 72,000 ಕೋಟಿ ರೂ. ಸಾಲ ಮನ್ನಾ ಮಾಡಿತ್ತು.
ಚಂದ್ರಶೇಖರ ಶೆಟ್ಟಿ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ