Friday 3rd, May 2024
canara news

ಸೇವಾ ನಿವೃತ್ತ ಎಂ. ಶಂಕರ ಮರಾಠೆಯವರಿಗೆ ಸನ್ಮಾನ ಸಮಾರಂಭ

Published On : 04 Feb 2018   |  Reported By : Rons Bantwal


ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಇಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ಶ್ರೀ ಎಂ. ಶಂಕರ ಮರಾಠೆ ಇವರ ನಿವೃತ್ತಿ ಸಂದರ್ಭದಲ್ಲಿ ದಿನಾಂಕ 02.02.2018 ಶುಕ್ರವಾರದಂದು ಅಪರಾಹ್ನ 2.30 ಗಂಟೆಗೆ ಸಂಸ್ಥೆಯ ಜನತಾ ಭವನದಲ್ಲಿ ಶಾಲಾಭಿವೃದ್ಧಿ ಸಮಿತಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿ ವೃಂದದ ವತಿಯಿಂದ ಮರಾಠೆ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಸಂಸ್ಥೆಯ ವಿದ್ಯಾರ್ಥಿನಿಯರಿಂದ ಪ್ರಾಥನೆಯ ಮೂಲಕ ಸಮಾರಂಭ ಆರಂಭಗೊಂಡಿತು. ಪ್ರಾಂಶುಪಾಲರಾದ ಶ್ರೀ ವಿಲಾಸ್ ಕುಮಾರ್ ಅವರು ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕಿ ಶ್ರೀಮತಿ ಉಮಾ ಕೆ.ಯವರು ಮರಾಠೆಯವರ ಜೀವನದ ಪ್ರಮುಖ ಘಟನಾವಳಿಗಳ ಸಿಂಹಾವಲೋಕನವನ್ನು ಮಾಡಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿ.ಡಿ.ಪಿ.ಯು.) ಶ್ರೀಮತಿ ವಿಜಯಲಕ್ಷ್ಮೀಯವರು ಈ ಸಂಸ್ಥೆಯಲ್ಲಿದ್ದಾಗ ಸಹೋದ್ಯೋಗಿಯಾಗಿದ್ದ ಸಂದರ್ಭಗಳನ್ನು ನೆನಪಿಸಿಕೊಂಡು, ನಿವೃತ್ತರಿಗೆ ಶುಭ ಹಾರೈಸಿದರು. ವಿದ್ಯಾರ್ಥಿ ಮುಖಂಡ ಕೃಷ್ಣ, ಜಿಪಿಎಲ್ ಕುಮಾರಿ ಮಾಯಾ ಹಾಗೂ ಇತರ ವಿದ್ಯಾರ್ಥಿಗಳು ಮರಾಠೆಯವರ ಬೋಧನಾ ವೈಶಿಷ್ಟ್ಯದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ದಿನೇಶ್ ಪುತ್ರನ್‍ರವರು ಸಂಸ್ಥೆಯಲ್ಲಿ ಮರಾಠೆಯವರ ಒಡನಾಟವನ್ನು ನೆನಪಿಸಿಕೊಂಡು ಕಾರ್ಯತತ್ಪರತೆಯನ್ನು ಪ್ರಶಂಸಿದರು. ವಿದ್ಯಾರ್ಥಿ ಸಂಘದ ಸಂಚಾಲಕರಾದ ಶ್ರೀಮತಿ ಗ್ರೇಸಿ ಕೆ.ಜೆ. ಕಾರ್ಯಕ್ರಮ ಸಂಯೋಜಿಸಿದ್ದರು. ಶ್ರೀಮತಿ ಸುಮಾ, ಶ್ರೀ ವಿಘ್ನೇಶ್ವರ ಭಟ್ ಮತ್ತು ಶ್ರೀಮತಿ ತೇಜಸ್ವಿನಿ ಇವರು ಸೇವೆಯಲ್ಲಿದ್ದಾಗಿನ ಸವಿನೆನಪುಗಳನ್ನು ಸ್ಮರಿಸಿದರು. ಸನ್ಮಾನಕ್ಕೆ ಮರಾಠೆಯವರು ಕೃತಜ್ಞತೆಗಳನ್ನು ಸಲ್ಲಿಸಿದರಲ್ಲದೆ ತಮ್ಮ ಪೂರ್ಣ ಸೇವಾವಧಿಯ ಘಟನಾವಳಿಗಳನ್ನು ನೆನಪಿಸಿಕೊಂಡರು. ಮರಾಠೆಯವರ ಪತ್ನಿಯಾದ ಶ್ರೀಮತಿ ಗೀತಾ ಕೆ.ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅನುರಾಧಾ ಅವರು ಧನ್ಯವಾದ ಸಮರ್ಪಣೆ ಮಾಡಿದರು. ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಆನಂದ ಗಾಣಿಗ ಹಾಗೆಯೇ ಸಂಸ್ಥೆಯ ನಿವೃತ್ತ ಉಪನ್ಯಾಸಕಿ ಶ್ರೀಮತಿ ಜಲಜಾಕ್ಷಿ ಇವರು ಸಭೆಯಲ್ಲಿ ಉಪಸ್ಥಿತರಿದ್ದರು.

ಪೂರ್ವಾಹ್ನದ ಅವಧಿಯಲ್ಲಿ ಪ್ರೌಢಶಾಲಾ ವತಿಯಿಂದ ಹಿರಿಯ ಅಧ್ಯಾಪಕ ಶ್ರೀ ಸುರೇಶ್ ಭಟ್ ಇವರ ಅಧ್ಯಕ್ಷತೆಯಲ್ಲಿ ಶ್ರೀಯುತರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಶ್ರೀ ಶಂಕರ ಮರಾಠೆಯವರ ಸಂಪರ್ಕ ಸಂಖ್ಯೆ: 9740071422




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here