Thursday 2nd, May 2024
canara news

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ಸಂಭ್ರಮದ ತಯಾರಿ

Published On : 05 Feb 2018   |  Reported By : Vincent Mascarenhas


ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬವನ್ನು ಫೆಬ್ರವರಿ 15ರಂದು ಸಂಭ್ರಮದಿಂದ ಆಚರಿಸಲಾಗುವುದು. ಹಬ್ಬಕ್ಕೆ ತಯಾರಿಯಾಗಿ ಫೆಬ್ರವರಿ 6 ರಂದು ಒಂಬತ್ತು ದಿನಗಳ ನವೇನ ಪ್ರಾರ್ಥನೆ ಆರಂಭಗೊಳ್ಳುವುದು. ಸಾಯಾಂಕಾಲ 4 ಗಂಟೆಗೆ ಅಲಂಕರಿಸಿದ ಸಂತ ಆಂತೋನಿಯವರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಜೆಪ್ಪು ಸಂತ ಆಂತೋನಿ ಆಶ್ರಮದಿಂದ ಕಂಕನಾಡಿ ವೃತ್ತ, ಫಳ್ನೀರ್ ಕಡೆಯಿಂದ ಮಿಲಾಗ್ರಿಸ್ ಚರ್ಚ್ ತನಕ ಕೊಂಡೊಯ್ಯಲಾಗುವುದು. ಶಿಮೊಗ್ಗ ಧರ್ಮಪ್ರಾಂತ್ಯದ ವಂ. ಫಾ. ಫ್ರಾಂಕ್ಲಿನ್ ಡಿ’ಸೋಜರವರು ಪುಣ್ಯ ಕ್ಷೇತ್ರದ ಧ್ವಜ ಹಾರಿಸಿ ಮೊದಲ ದಿನದ ಬಲಿಪೂಜೆಯನ್ನು ಅರ್ಪಿಸುವರು.

ಒಂಬತ್ತು ದಿನಗಳ ನವೇನ ಪ್ರಾರ್ಥನೆಯ ಸಮಯದಲ್ಲಿ ಒಂಬತ್ತು ವಿವಿಧ ವರ್ಗಗಳ (ಯುವ ಜನರು, ಮಕ್ಕಳು, ದಂಪತಿ, ವ್ಯಾಧಿಸ್ತರು, ಧಾರ್ಮಿಕರು, ಮುಖಂಡರು) ಜನರಿಗಾಗಿ ಪ್ರಾರ್ಥಿಸಲಾಗುವುದು. ಬಲಿ ಪೂಜೆ ಅರ್ಪಿಸಲು ಮತ್ತು ಪ್ರವಚನ ನೀಡಲು ಪ್ರಖ್ಯಾತ ಧರ್ಮಗುರುಗಳನ್ನು ಆಹ್ವಾನಿಸಲಾಗಿದೆ. ಆಯಾಯ ದಿನದ ವರ್ಗಗಳ ಜನರಿಗೆ ಸಂಭದ ಪಟ್ಟಂತೆ ಪ್ರವಚನ ನೀಡಲಾಗುವುದು.

ಹಬ್ಬದ ಬಲಿಪೂಜೆಯನ್ನು ಅ. ವಂ. ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರಿನ ಧರ್ಮಾಧ್ಯಕ್ಷರು ಫೆಬ್ರವರಿ 15 ರಂದು ಸಾಯಾಂಕಾಲ 6 ಗಂಟೆಗೆ ಮಿಲಾಗ್ರಿಸ್ ಚರ್ಚ್ ಮೈದಾನದಲ್ಲಿ ಅರ್ಪಿಸುವರು. ಸಾಯಾಂಕಾಲ 4.30 ಗಂಟೆಗೆ ಕಲ್ಲಿಕೋಟೆ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಅ. ವಂ. ಡಾ. ವರ್ಗಿಸ್ ಚಕ್ಕಲಕಲ್ ಮಲಯಾಳಂ ಭಾಷೆಯಲ್ಲಿ ಅರ್ಪಿಸುವರು. ಬೆಳಗ್ಗೆ 8 ಗಂಟೆಗೆ ವ್ಯಾದಿಸ್ತರಿಗಾಗಿ ವಂ. ಡಾ. ಪಿಯುಸ್ ಡಿ’ಸೋಜ, ಎಪಿಸ್ಕೋಪಲ್ ವಿಕಾರ್ ಧಾರ್ಮಿಕರಿಗಾಗಿ, ಬಲಿಪೂಜೆಯನ್ನು ಅರ್ಪಿಸುವರು. 11 ಗಂಟೆಗೆ ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭು ಧರ್ಮಪ್ರಾಂತ್ಯದ ಶ್ರೇಷ್ಟ ಗುರುಗಳು ಅಶ್ರಮದ ನಿವಾಸಿ ಮತ್ತು ವಿಶೇಷ ಆಹ್ವಾನಿತರಿಗಾಗಿ ಅರ್ಪಿಸುವರು.

13ನೇ ಶತಮಾನದಲ್ಲಿ ಪೆÇೀರ್ಚುಗಲ್‍ನಲ್ಲಿ ಜೀಸಿದ ಸಂತ ಆಂತೋನಿಯವರ ನಾಲಗೆ ಮತ್ತು ಸ್ವರ ಗಂಟಲು ಇಂದಿಗೂ ಜೀವಂತವಾಗಿದ್ದು ಇಟಲಿಯ ಪಾದ್ವ ನಗರದಲ್ಲಿನ ಸಂತ ಆಂತೋನಿಯವರ ಮಹಾ ದೇವಲಯದಲ್ಲಿ ಇಡಲಾಗಿದೆ. ಈ ಪುಣ್ಯ ಸ್ಮರಣಿಕೆಗಳ ಗೌರಾವಾರ್ಥ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಪತ್ರಿಕಾ ಗೋಷ್ಟಿಯಲ್ಲಿ ಆಶ್ರಮದ ನಿರ್ದೇಶಕ ಫಾ. ಒನಿಲ್ ಡಿ’ಸೋಜ, ಆಡಳಿತಧಿಕಾರಿ ಫಾ. ಫ್ರಾನ್ಸಿಸ್ ಡಿ’ಸೋಜ, ಧರ್ಮಪ್ರಾಂತ್ಯದ ಮಾಧ್ಯಮ ಸಮಿತಿಯ ಕಾರ್ಯದರ್ಶಿ ಶ್ರೀ ವಿನ್ಸೆಂಟ್ ಮಸ್ಕರೇನಸ್ ಉಪಸ್ಥಿತರಿದ್ದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here