ಮುಂಬಯಿ, ಫೆ.06: ಗೋರೆಗಾಂವ್ ಪೂರ್ವದಲ್ಲಿ ಕಳೆದ ಸುಮಾರು ಮೂರು ದಶಕಗಳಿಂದ ಸೇವಾ ನಿರತ ಕನ್ನಡ ಬಳಗ ಗೋಕುಲ್ಧಾಮ್ ಪರಿಸರ ಇದರ 31ನೇ ವಾರ್ಷಿಕೋತ್ಸವವನ್ನು ಇದೇ ಫೆ.10ನೇ ಶನಿವಾರ ಗೋರೆಗಾಂವ್ ಪೂರ್ವದಲ್ಲಿನ ಗೋಕುಲ್ಧಾಮ್ ಶಾಪಿಂಗ್ ಸೆಂಟರ್ನ ಸನಿಹದಲ್ಲಿನ ಆರ್ಎಂಎಂಎಸ್ ಸೆಕ್ಟರ್ನ ಗಣೇಶ ಮೈದಾನದಲ್ಲಿ ಆಯೋಜಿಸಲಾಗಿದೆ.
ಸಂಜೆ 6.30 ಗಂಟೆಗೆ ಬಳಗದ ಅಧ್ಯಕ್ಷ ಜಿ.ಪಿ ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ರಂಗ ನಿರ್ದೇಶಕ ಡಾ| ಭರತ್ ಕುಮಾರ್ ಪೆÇಲಿಪು ಸಮಾರಂಭ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿsಯಾಗಿ ಮಾತೃಭೂಮಿ ಕೋ.ಅಪರೇಟಿವ್ ಸೊಸೈಟಿ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಗೌರವ ಅತಿಥಿsಗಳಾಗಿ ಸರ್ವೋಚ್ಛ ನ್ಯಾಯಲ ಯದ ವಕೀಲ ನ್ಯಾ| ಶಶಿಧರ್ ಯು.ಕಾಪು, ರತ್ನಾ ಇಂಟರ್ನ್ಯಾಷನಲ್ ಸಮೂಹದ ನಿರ್ದೇಶಕ ಉಮೇಶ್ ಶೆಟ್ಟಿ, ನೃತ್ಯಪಟು,ಕೊರಿಯೋಗ್ರಾಫರ್, ಚಿತ್ರನಟ ಸುಶಾಂತ್ ಎಸ್. ಪೂಜಾರಿ, ಬಳಗದ ಮಾಜಿ ಅಧ್ಯಕ್ಷ ಅಂತಯ್ಯ ಎ.ಬಂಗೇರ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ.
ಸಂಜೆ 4.00 ಗಂಟೆಗೆ ಧಾರ್ಮಿಕ ಕಾರ್ಯಕ್ರಮವಾಗಿ ಶ್ರೀ ಸತ್ಯನಾರಾಯಣ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಾವಾಗಿ ನೃತ್ಯ ವೈಭವ, ಶ್ರೀ ಗುರು ಕಲಾ ತಂಡ ಮುದರಂಗಡಿ ಇವರು ರೋಹನ್ ಕುಮಾರ್ ಸಾರಥ್ಯದಲ್ಲಿ ರಮಾನಂದ್ ನಾಯಕ್ ರಚಿಸಿ, ರಂಜಿತ್ ಸಾಂತೂರು ನಿರ್ದೇಶನದಲ್ಲಿ `ಪತ್ತಾದ್ ಪದ್ರಾಡ್' ತುಳು ಹಾಸ್ಯಮಯ ನಾಟಕವನ್ನು ಪ್ರದರ್ಶಿಸಲಿದ್ದಾರೆ.
ಗೋರೆಗಾಂವ್ ಆಸುಪಾಸಿನ ಎಲ್ಲಾ ತುಳುಕನ್ನಡಿಗರು, ಕಲಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಗೌರವ ಪ್ರಧಾನ ಕಾರ್ಯದರ್ಶಿ ಟಿ.ಎ ಪೂಜಾರಿ, ಗೌರವ ಕೋಶಾಧಿಕಾರಿ ಎಸ್.ಎನ್ ದೇವಾಡಿಗ, ಉಪ ಕಾರ್ಯದರ್ಶಿ ಶಶಿಧರ್ ಬಂಗೇರ ಈ ಮೂಲಕ ವಿನಂತಿಸಿದ್ದಾರೆ.