Monday 29th, April 2024
canara news

ಮಾ.18-25: ಅದಮಾರು ಮಠದಲ್ಲಿ ರಾಮನವಮಿಯ ಪ್ರಯುಕ್ತ

Published On : 15 Mar 2018   |  Reported By : Rons Bantwal


ಶ್ರೀ ವಿಶ್ವಪ್ರಿಯತೀರ್ಥ ಸ್ವಾಮಿಜಿ ಅವರಿಂದ ರಾಮಾಯಣ ಪ್ರವಚನ

ಮುಂಬಯಿ, ಮಾ.15: ಅಂಧೇರಿ ಪಶ್ಚಿಮದ ಎಸ್.ವಿ.ರೋಡ್‍ನ ಇರ್ಲಾ ಅಲ್ಲಿನ ಶ್ರೀ ಆದಮಾರು ಮಠದಲ್ಲಿ ಶ್ರೀ ರಾಮ ನವಮಿ-2018ನ್ನು ಅದ್ದೂರಿಯಾಗಿ ಸಂಭ್ರಮಿಸಲಾಗುತ್ತಿದ್ದು, ವಾರ್ಷಿಕ ರಾಮನವಮಿ ಉತ್ಸವದ 22ನೇ ವಾರ್ಷಿಕ ಸಮಾರಂಭ ನಿಮಿತ್ತ ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿಜಿ ಅವರು ರಾಮಾಯಣ ಪ್ರವಚನ ನೀಡಲಿದ್ದಾರೆ.

ವಾರ್ಷಿಕ ರಾಮನವಮಿ ಪೂರ್ವ ಸಿದ್ಧತೆಯಾಗಿ ಇದೇ ಮಾ.18ನೇ ಆದಿತ್ಯವಾರ ದಿಂದ ಮಾ.25ರ ಆದಿತ್ಯವಾರ ರಾಮನವಮಿ ತನಕ ದಿನಂಪ್ರತಿ ಸಂಜೆ 5.30 ರಿಂದ ರಾತ್ರಿ 7.00 ಗಂಟೆ ತನಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ 7.00 ಗಂಟೆಯಿಂದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮಿಜಿ ಅವರಿಂದ ಪ್ರವಚನ ನಡೆಯಲಿವೆ.

ಮಾ.18ನೇ ಆದಿತ್ಯವಾರ ನೃತ್ಯ ರಂಜನಿ ಫೈನ್‍ಆರ್ಟ್ಸ್ ಕಾಂದಿವಲಿ ಇದರ ಗುರು ರೇವತಿ ಅವರಿಂದ ಭರತನಾಟ್ಯ, ಮಾ.19ನೇ ಸೋಮವಾರ ಸಂಜೆ ವಿದುಷಿ ಅಪರ್ಣಾ ಭಟ್ ಅವರಿಂದ ಭಕ್ತಿ ಗೀತೆಗಳು. ಮಾ.20ನೇ ಮಂಗಳವಾರ ಸಂಜೆ ಸ್ವರ ಜ್ಯೋತಿರ್‍ಮಯ ಬಳಗದ ವಿದುಷಿ ಚಂದ್ರಿಕಾ ಭಟ್ ಅವರಿಂದ ದೇವರ ನಾಮ, ಮಾ.21ನೇ ಬುಧವಾರ ಸಂಜೆ ಗೋಪಾಲಕೃಷ್ಣ ಮತ್ತು ಗೋಕುಲ ಭಜನಾ ಮಂಡಳಿ ಅವರಿಂದ ದೇವರ ನಾಮ, ಮಾ.22ನೇ ಗುರುವಾರ ಸಂಜೆ ಕು| ಕೃತಿ ಚಡಗ ಅವರಿಂದ ಭರತನಾಟ್ಯ, ಮಾ.23ನೇ ಶುಕ್ರವಾರ ಸಂಜೆ ವಿನಿತಾ ಆಚಾರ್ಯ ಅವರಿಂದ ದೇವರ ನಾಮ ಮತ್ತು ನಂದಿತಾ ಆಚಾರ್ಯ ಅವರಿಂದ ಸಿತಾರ್ ವಾದನ, ಮಾ.24ನೇ ಶನಿವಾರ ಗುರು ಸಹನಾ ಭಾರಧ್ವಾಜ್ ಅವರಿಂದ ಭರತ ನಾಟ್ಯ ಕಾರ್ಯಕ್ರಮಗಳು ನಡೆಯಲಿದೆ.

ಮಾ.25ನೇ ರವಿವಾರ ರಾಮ ನವಮಿ ದಿನ ಬೆಳಿಗ್ಗೆ 7.00 ಗಂಟೆಗೆ ಪಂಚಾಮೃತ ಅಭಿಷೇಕ, ಪೂರ್ವಾಹ್ನ 8.30 ಗಂಟೆಯಿಂದ ಚಾರ್ಕೋಪ್ ಕನ್ನಡಿಗರ ಬಳಗದಿಂದ ಹರಿ ಭಜನೆ, ವಾಗ್ದೇವಿ ಭಜನಾ ಮಂಡಳಿಯಿಂದ ದೇವರ ನಾಮ. ಮಧ್ಯಾಹ್ನ 11.30 ಗಂಟೆಗೆ ಮಹಾಪೂಜೆ, 12.30 ಗಂಟೆಯಿಂದ ತೀರ್ಥ ಪ್ರಸಾದ ವಿತರಣೆ ಮತ್ತು ಅಮಿತಾ ಕಲಾ ಮಂದಿರ ವಿೂರಾರೊಡ್ ಸಂಸ್ಥೆಯಿಂದ ಭರತನಾಟ್ಯ, 1.30 ಗಂಟೆಯಿಂದ ದಿನೇಶ್ ಕೋಟ್ಯಾನ್ ಅವರಿಂದ ಸೆಕ್ಸೊಫೆÇೀನ್ ವಾದನ, 2.30 ಗಂಟೆಯಿಂದ ಅರ್ಪಿತಾ ಪೂಜಾರಿ ಅವರಿಂದ ಭರತನಾಟ್ಯ, ಸಂಜೆ 3.00 ಗಂಟೆಯಿಂದ ನಾಗೇಶ್ ವಿೂರಾರೋಡ್ ಅವರಿಂದ ಲವ-ಕುಶ ಯಕ್ಷಗಾನ ಪ್ರಸಂಗ, 4.00 ಗಂಟೆಯಿಂದ ವಿಠಲ ಭಜನಾ ಮಂಡಳಿಯಿಂದ ಹರಿ ಭಜನೆ, 5.00 ಗಂಟೆಯಿಂದ ಶ್ರೀನಿವಾಸ ಭಟ್ ಅವರಿಂದ ರಾಮಾಯನ ಹರಿಕಥೆ, 6.00 ಗಂಟೆಯಿಂದ ಪಲ್ಲಕ್ಕಿ ಉತ್ಸವ, 7.00 ಗಂಟೆಯಿಂದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮಿಜಿ ಅವರಿಂದ ವಿಶೇಷ ಪ್ರವಚನ, ರಾತ್ರಿ 8.00 ಗಂಟೆಗೆ ಮಹಾಪೂಜೆ ನಂತರ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿದೆ.

ಆ ಪ್ರಯುಕ್ತ ಮಹಾನಗರದಲ್ಲಿನ ಸರ್ವ ಭಕ್ತರೂ ಎಲ್ಲಾ ಪ್ರವಚನ, ಪೂಜಾಧಿಗಳಲ್ಲಿ ಉಪಸ್ಥಿತರಿದ್ದು ಮಹಾ ಪ್ರಸಾದ ಸ್ವೀಕರಿಸಬೇಕಾಗಿ ಶ್ರೀ ಅದಮಾರು ಮಠ ಮುಂಬಯಿ ಶಾಖೆಯ ದಿವಾಣ ಲಕ್ಷಿ ್ಮೀನಾರಾಯಣ ಮುಚ್ಚಿಂತ್ತಾಯ ಹಾಗೂ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ತಿಳಿಸಿದ್ದಾರೆ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here