ಮುಂಬಯಿ, ಮಾ.21: ಮಹಾನಗರ ಮುಂಬಯಿಯಲ್ಲಿ ಕಳೆದ ಸುಮಾರು ಏಳುವರೆ ದಶಕಗಳಿಂದ ದೀರ್ಘಾವಧಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆಗಳಿಂದ ಕಾರ್ಯನಿರತ ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಸಂಸ್ಥೆಯ 2018-2020 ಸಾಲಿನ ಅಧ್ಯಕ್ಷರಾಗಿ ರಾಜ್ಕುಮಾರ್ ಕಾರ್ನಾಡ್ ಸರ್ವಾನುಮತದಿಂದ ಪುನಾರಾಯ್ಕೆಯಾದರು.
Rajkumar Ravindranath Khedarnath
Navin S.Rao
ಇತ್ತೀಚೆಗೆ ನಡೆಸಲಾದ ರಾಮರಾಜ ಕ್ಷತ್ರಿಯ ಸೇವಾ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಎನ್.ರವೀಂದ್ರನಾಥ್ ರಾವ್ (ಉಪಾಧ್ಯಕ್ಷ), ಕೇದರ್ನಾಥ ಆರ್.ಬೋಳಾರ್ (ಗೌರವ ಪ್ರಧಾನ ಕಾರ್ಯದರ್ಶಿ), ನವೀನ್ ಎಸ್.ರಾವ್ (ಗೌರವ ಕೋಶಾಧಿಕಾರಿ), ರಿತೇಶ್ ಆರ್.ರಾವ್ ಮತ್ತು ನಿತ್ಯಾನಂದ ಸಿ.ರಾವ್ (ಜೊತೆ ಕಾರ್ಯದರ್ಶಿಗಳು), ರೂಪೇಶ್ ಆರ್.ರಾವ್ (ಜೊತೆ ಕೋಶಾಧಿಕಾರಿ) ಆಗಿ ಆಯ್ಕೆ ಗೊಂಡರು.