Monday 29th, April 2024
canara news

ಡೌನ್ ಸಿಂಡ್ರೊಮ್ ಅಸೋಸಿಯೇಶನ್‍ನ ಪೋಷಕರಿಂದ ಕೃಷ್ಣ ಪ್ಯಾಲೇಸ್‍ನಲ್ಲಿ ವಿಶ್ವ ಸಿಂಡ್ರೊಮ್ ದಿನಾಚರಣೆ

Published On : 24 Mar 2018   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾರ್ಚ್.24: ಮಹಾನಗರದಲ್ಲಿನ ಡೌನ್ ಸಿಂಡ್ರೊಮ್ ಅಸೋಸಿಯೇಶನ್‍ನ ಪೋಷಕರಿಂದ ಕಳೆದ ಬುಧವಾರ ವಿಶ್ವ ಡೌನ್ ಸಿಂಡ್ರೊಮ್ ದಿನಾಚರಣೆ ಸಂಭ್ರಮಿಸಲ್ಪಟ್ಟಿತು.

ಆ ಪ್ರಯುಕ್ತ ಅಂಧೇರಿ ಪಶ್ಚಿಮದಿಂದ ಎರಡು ಬಸ್ಸುಗಳೊಂದಿಗೆ ಸಿಂಡ್ರೊಮ್ ಪೀಡಿತ ಮಕ್ಕಳನ್ನೊಳಗೊಂಡು ದಕ್ಷಿಣ ಮುಂಬಯಿ ಅಲ್ಲಿನ ಗೇಟ್ ವೇ ಆಫ್ ಇಂಡಿಯಾ ಭೇಟಿಗೈಯಲಾಯಿತು. ಅಲ್ಲಿ ಪ್ರಕಟನಾಪತ್ರಗಲ್ಲಿ ವರ್ಣಿಸುತ್ತಾ ಡೌನ್ ಸಿಂಡ್ರೊಮ್ ಬಗ್ಗೆ ಸಾರ್ವಜನಿಕ ಅರಿವು ಮೂಡಿಸಲಾಯಿತು.

ಬಳಿಕ ನಾನಾಚೌಕ್ ಅಲ್ಲಿನ ಕೃಷ್ಣ ಪ್ಯಾಲೇಸ್ ಹೊಟೇಲ್‍ನಲ್ಲಿ ವಿಶ್ವ ಡೌನ್ ಸಿಂಡ್ರೊಮ್ ದಿನಾಚರಣೆ ಆಚರಿಸಲಾಗಿದ್ದು ಕೃಷ್ಣ ಪ್ಯಾಲೇಸ್‍ನ ನಿರ್ದೇಶಕರುಗಳಾದ ಕೃಷ್ಣ ವೈ.ಶೆಟ್ಟಿ ಮತ್ತು ಉಮಾ ಕೃಷ್ಣ ಶೆಟ್ಟಿ ದಂಪತಿಗಳು ಪಾಲ್ಗೊಂಡು ಸಂಭ್ರಮಕ್ಕೆ ಚಾಲನೆಯನ್ನೀಡಿದರು.

ಮಕ್ಕಳು ಗೇಮ್ಸ್, ಸಂಗೀತ, ನೃತ್ಯಾವಳಿ, ಪ್ರಹಸನ ಇತ್ಯಾದಿಗಳೊಂದಿಗೆ ಕುಣಿದು ಕುಪ್ಪಳಿಸುತ್ತ ಸಂಭ್ರಮಕ್ಕೆ ಮೆರುಗು ನೀಡಿದರು. ಡೌನ್ ಸಿಂಡ್ರೊಮ್ ಅಸೋಸಿಯೇಶನ್‍ನ ಪೆÇೀಷಕ ಸಂಸ್ಥೆಯ ಉಪಾಧ್ಯಕ್ಷೆ ಅಮೃತಾ ಎಂ.ಶೆಟ್ಟಿ ನೇತೃತ್ವದಲ್ಲಿ ಆಚರಿಸಲ್ಪಟ್ಟ ವಿಶೇಷ ತರದ ದಿನಾಚರಣೆ ಮಕ್ಕಳಲ್ಲಿ ಉತ್ಸಾಹ ತುಂಬಿ ಹೊಸತನ ಮೂಡಿಸಿತು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here