(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮಾರ್ಚ್.24: ಮಹಾನಗರದಲ್ಲಿನ ಡೌನ್ ಸಿಂಡ್ರೊಮ್ ಅಸೋಸಿಯೇಶನ್ನ ಪೋಷಕರಿಂದ ಕಳೆದ ಬುಧವಾರ ವಿಶ್ವ ಡೌನ್ ಸಿಂಡ್ರೊಮ್ ದಿನಾಚರಣೆ ಸಂಭ್ರಮಿಸಲ್ಪಟ್ಟಿತು.
ಆ ಪ್ರಯುಕ್ತ ಅಂಧೇರಿ ಪಶ್ಚಿಮದಿಂದ ಎರಡು ಬಸ್ಸುಗಳೊಂದಿಗೆ ಸಿಂಡ್ರೊಮ್ ಪೀಡಿತ ಮಕ್ಕಳನ್ನೊಳಗೊಂಡು ದಕ್ಷಿಣ ಮುಂಬಯಿ ಅಲ್ಲಿನ ಗೇಟ್ ವೇ ಆಫ್ ಇಂಡಿಯಾ ಭೇಟಿಗೈಯಲಾಯಿತು. ಅಲ್ಲಿ ಪ್ರಕಟನಾಪತ್ರಗಲ್ಲಿ ವರ್ಣಿಸುತ್ತಾ ಡೌನ್ ಸಿಂಡ್ರೊಮ್ ಬಗ್ಗೆ ಸಾರ್ವಜನಿಕ ಅರಿವು ಮೂಡಿಸಲಾಯಿತು.
ಬಳಿಕ ನಾನಾಚೌಕ್ ಅಲ್ಲಿನ ಕೃಷ್ಣ ಪ್ಯಾಲೇಸ್ ಹೊಟೇಲ್ನಲ್ಲಿ ವಿಶ್ವ ಡೌನ್ ಸಿಂಡ್ರೊಮ್ ದಿನಾಚರಣೆ ಆಚರಿಸಲಾಗಿದ್ದು ಕೃಷ್ಣ ಪ್ಯಾಲೇಸ್ನ ನಿರ್ದೇಶಕರುಗಳಾದ ಕೃಷ್ಣ ವೈ.ಶೆಟ್ಟಿ ಮತ್ತು ಉಮಾ ಕೃಷ್ಣ ಶೆಟ್ಟಿ ದಂಪತಿಗಳು ಪಾಲ್ಗೊಂಡು ಸಂಭ್ರಮಕ್ಕೆ ಚಾಲನೆಯನ್ನೀಡಿದರು.
ಮಕ್ಕಳು ಗೇಮ್ಸ್, ಸಂಗೀತ, ನೃತ್ಯಾವಳಿ, ಪ್ರಹಸನ ಇತ್ಯಾದಿಗಳೊಂದಿಗೆ ಕುಣಿದು ಕುಪ್ಪಳಿಸುತ್ತ ಸಂಭ್ರಮಕ್ಕೆ ಮೆರುಗು ನೀಡಿದರು. ಡೌನ್ ಸಿಂಡ್ರೊಮ್ ಅಸೋಸಿಯೇಶನ್ನ ಪೆÇೀಷಕ ಸಂಸ್ಥೆಯ ಉಪಾಧ್ಯಕ್ಷೆ ಅಮೃತಾ ಎಂ.ಶೆಟ್ಟಿ ನೇತೃತ್ವದಲ್ಲಿ ಆಚರಿಸಲ್ಪಟ್ಟ ವಿಶೇಷ ತರದ ದಿನಾಚರಣೆ ಮಕ್ಕಳಲ್ಲಿ ಉತ್ಸಾಹ ತುಂಬಿ ಹೊಸತನ ಮೂಡಿಸಿತು.