ಮುಂಬಯಿ,: ಪೂಜಾ ಪ್ರಕಾಶ ಮುಂಬಯಿ ಇದರ ಸ್ಥಾಪಕ, ಕೃತಿಕಾರ, ಹಿರಿಯ ಕವಿ, ಶಿಮಂತೂರು ಚಂದ್ರಹಾಸ ಸುವರ್ಣ ಅವರಿಗೆ ಕರ್ನಾಟಕರ ರಾಜ್ಯ ತುಳು ಅಕಾಡೆಮಿಯ ವಾರ್ಷಿಕ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ ಎಂದು ತುಳು ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ ತಿಳಿಸಿದರು.
ಇಂದಿಲ್ಲಿ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು ಕಥಾ ವಿಭಾಗಕ್ಕೆ ಮುಂಬಯಿನ ಹೆಸರಾಂತ ಕವಿ, ಲೇಖಕ ಶಿಮಂತೂರು ಚಂದ್ರಹಾಸ ಸುವರ್ಣ ಅವರ `ಗಗ್ಗರ' ತುಳು ಕಥಾ ಸಂಕಲನವು ಪಾತ್ರವಾಗಿದೆ ಎಂದು ಮಂಗಳೂರು ಅಲ್ಲಿನ ಅಕಾಡೆಮಿಯ ಕಛೇರಿಯಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಅಂತೆಯೇ ಡಾ| ಎನ್.ನಾರಾಯಣ ಶೆಟ್ಟಿ (ಯಕ್ಷಗಾನ), ಮಂಜನಾಡಿ ಸೇಸಪ್ಪ ಪಂಬದ (ಜಾನಪದ), ಹೆಚ್. ಶಕುಂತಲಾ ಭಟ್ (ಸಾಹಿತ್ಯ), ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ (ಅಧ್ಯಯನ ವಿಭಾಗ) ರೂಪಕಲಾ ಆಳ್ವ (ಕವನ ವಿಭಾಗ) ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಬರುವ ಎಪ್ರಿಲ್ 07ರಂದು ಮಂಗಳೂರು ಉರ್ವಾ ಅಲ್ಲಿನ ತುಳು ಭವನದಲ್ಲಿ ನಡೆಯಲಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್ ಲೋಬೊ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿ ಸಚಿವ ಮತ್ತು ಅರಣ್ಯ ಖಾತೆ ಮಂತ್ರಿ ಬಿ. ರಮಾನಾಥ ರೈ ಉದ್ಘಾಟಿಸಲಿರುವರು. ಕರ್ನಾಟಕ ರಾಜ್ಯ ಮಾಜಿ ಲೋಕಾಯುಕ್ತ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಮುಖ್ಯ ಅತಿಥಿsಗಳಾಗಿ ಉಪಸ್ಥಿತರಿರುವರು ಎಂದು ತುಳು ಸಾಹಿತ್ಯ ಆಕಾಡೆಮಿ ರೆಜಿಸ್ತಾರ್ ಚಂದ್ರಹಾಸ ರೈ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ, ಬೆನೆಟ್ ಅಮ್ಮಣ್ಣ, ತಾರಾನಾಥ ಗಟ್ಟಿ, ಶಿವಾನಂದ ಕರ್ಕೇರ ಮೊದಲಾದವರು ಉಪಸ್ಥಿತರಿದ್ದು ಪ್ರಶಸ್ತಿ ವಿಜೇತರಿಗೆ ಅಭಿನಂದಿಸಿದರು.