ಕುಂದಾಪುರ,ಮಾ.25: ‘ನಮಗಾಗಿ ಯೇಸು ಸ್ವಾಮಿ ಬಹಳವಾದ ಕಶ್ಟ ಹಿಂಸೆ ಅನುಭವಿಸಿದರು. ಅವರ ಪಟ್ಟ ಕಶ್ಟವನ್ನು ಮನದಟ್ಟು ಮಾಡಿಕೊಳ್ಳಬೇಕು. ಈ ಪವಿತ್ರ ವಾರದಲ್ಲಿ ನಾವು ಬಡ ಬಗ್ಗರನ್ನು ಪ್ರೀತಿಯಿಂದ ಕಾಣುವ, ಅವರಿಗೆ ದಾನ ಧರ್ಮ ಮಾಡುವ, ನೆರೆಮನೆಯವರ ಜೊತೆ ಒಡಹುಟ್ಟಿದವರ ಜೊತೆ ಕರುಣೆ ಮಮತೆಯನ್ನು ಹೊಂದುಕೊಳ್ಳುವ. ಯೇಸುವಿನಂತೆ ನಾವೂ ಕಶ್ಟ ಕಾರ್ಪಣ್ಯವನ್ನು ಅನುಭವಿಸ ಬೇಕು, ನಮಗಾಗಿ ಯೇಸು ಪ್ರಾಣವನ್ನೆ ಬಲಿದಾನ ನೀಡಿದ್ದಾರೆ, ಹಾಗಾಗಿ ನಮಗೆ ಮುಕ್ತಿ ದೊರಕಬೇಕಾದರೆ, ಯೇಸು ಹೇಳಿಕೊಟ್ಟ ಒಳ್ಳೆಯ ಮಾರ್ಗದಲ್ಲಿ, ನಮ್ಮ ಜೀವನವನು ಮುನ್ನಡೇಸೋಣ, ಅವಾಗಲೇ ನಮಗೆ ಮುಕ್ತಿ ದೊರಕುವುದು. ಎಂದು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ವಂ|ಫಾ|ಅನಿಲ್ ಡಿಸೋಜಾ ಸಂದೇಶ ನೀಡಿದರು.
ಅವರು ಕುಂದಾಪುರ ರೊಜರಿ ಮಾತಾ ಇಗರ್ಜಿಯ, ಮೇರಿ ಮಾತೆಯ ಗ್ರೊಟ್ಟೊದ ಮುಂದೆ ಗರಿಗಳನ್ನು ಆಶಿರ್ವದಿಸಿದ ತರುವಾಯ ಇಗರ್ಜಿಯಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು. ಈ ಪವಿತ್ರ ಬಲಿದಾನದಲ್ಲಿ ಸಹಾಯಕ ಧರ್ಮಗುರು ವಂ|ಫಾ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಪ್ರಾಂಶುಪಾಲ ವಂ|ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ಗೋವೆಯಿಂದ ಬಂದಂತಹ ಅತಿಥಿ ಧರ್ಮಗುರು ವಂ|ಫಾ|ಇಜಿಸ್ತ್ಯಾಂವ್ ಮೊಂತೇರೊ ಸಹಬಲಿದಾನದಲ್ಲಿ ಭಾಗಿಯಾದರು.
ಗರಿಗಳನ್ನು ಆಸಿರ್ವದಿಸಿದ ತರುವಾಯ ಇಗರ್ಜಿಯ ಹೊರ ರಸ್ತೆಯಲ್ಲಿ ಮತ್ತು ಇಗರ್ಜಿಯ ಮೈದಾನದಲ್ಲಿ ಗರಿಗಳನ್ನು ಹಿಡಿಕೊಂಡು ಭಕ್ತಿಪೂರ್ವಕ ಮೆರವಣಿಗೆಯನ್ನು ನೆಡೆಸಲಾಯಿತು ಅನೇಕ ಧರ್ಮ ಭಗಿನಿಯರು ಪಾಲನ ಮಂಡಳಿ ಉಪಾಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಮತ್ತು ಹಲವಾರು ಭಕ್ತರು ಈ ಪೂಜಾವಿಧಿಯಲ್ಲಿ ಪಾಲುಗೊಂಡರು.