ಮುಂಬಯಿ, ಮಾ. 28: ಕರ್ನಾಟಕ ಮತ್ತು ಕೇರಳ ರಾಜ್ಯದ ರೈಲ್ವೆ ಪ್ರಯಾಣಿಕರ ಹಿತದೃಷ್ಟಿಯಿಂದ ಮಾನ್ಯ ಸಂಸದರಾದ ಗೋಪಾಲ ಶೆಟ್ಟಿ ನೇತೃತ್ವದ ಅಯೋಗವು ಇತ್ತೀಚೆಗೆ ಭಾರತ ಸರಕಾರದ ಕೇಂದ್ರ ರೈಲ್ವೆ ಮಂತ್ರಿಗಳಾದ ಮಾನ್ಯ ಶ್ರೀ ಪೀಯೂಶ್ ಗೋಯೆಲ್ ಇವರನ್ನು ಭೇಟಿ ಮಾಡಿ ರೈಲ್ವೆ ಪ್ರಯಾಣಿಕರ ಈ ಕೆಳಗಿನ ಬೇಡಿಕೆಗಾಗಿ ಮನವಿಯನ್ನು ಸಲ್ಲಿಸಿತು. ಪಶ್ಚಿಮ ರೈಲ್ವೆ ವಿಭಾಗದಿಂದ ಕೊಂಕಣ್ ರೈಲ್ವೆ ಮೂಲಕ ಮಂಗಳೂರು ಸೆಂಟ್ರಲ್ ಗೆ ರೈಲು, ಪಶ್ಚಿಮ ರೈಲ್ವೆ ಮತ್ತು ಮಂಗಳೂರು ಸೆಂಟ್ರಲ್ ರೈಲುಗಾಗಿ ಸುಮಾರು 7 ಕಿಲೋ ಮೀಟರ್ ಉದ್ದದ ಹಳಿ ಜೋಡಣೆ, ಎಲ್ಲಾ ರೈಲ್ವೆ ಪ್ರಯಾಣಿಕರಿಗೆ ವಿಮಾ ಸೌಲಭ್ಯ ನೀಡುವುದು, ಮುಂಬೈನಿಂದ ಮಂಗಳೂರಿಗೆ ಸಂಚರಿಸುವ ಮಂಗಳೂರು ಎಕ್ಸ್ ಪ್ರೆಸ್ ಗೆ ಮುಲ್ಕಿಯಲ್ಲಿ ನಿಲುಗಡೆ ಕೋರಿಕೆಗಳನ್ನು ನೀಡಿದರು.
ಮಾನ್ಯ ಕೇಂದ್ರ ರೈಲ್ವೆ ಮಂತ್ರಿಗಳು ಈ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಸಕಾರಾತ್ಮಕ ಒಪ್ಪಿಗೆಯನ್ನು ಸೂಚಿಸಿ, ಇದೀಗ ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಚುನಾವಣಾ ನಂತರ ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದರು. ಈ ನಮ್ಮ ಬೇಡಿಕೆಯು ಹಲವಾರು ವರ್ಷಗಳ ನಿರಂತರ ಪ್ರಯತ್ನದಿಂದ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಲು ಸಂತೋಷಪಡುತ್ತೇವೆ.
ನಿಯೋಗದ ನೇತೃತ್ವವನ್ನು ಸಂಸದರಾದ ಗೋಪಾಲ ಶೆಟ್ಟಿ ವಹಿಸಿದ್ದು, ರೈಲ್ ಯಾತ್ರಿ ಸಂಘ ಬೊರಿವಿಲಿ ವತಿಯಿಂದ ವಿರಾರ್ ಶಂಕರ್ ಶೆಟ್ಟಿ , ಉದಯಕುಮಾರ್ ಶೆಟ್ಟಿ ಶಿಮಂತೂರು, ಶ್ರೀಮತಿ ಶೀಲಾ ಶೆಟ್ಟಿ, ರಂಜಿತ್ ಸುವರ್ಣ, ಮೋನ್ ಡಿಕೋಸ್ಟ ಉಪಸ್ಥಿತರಿದ್ದರು