ಮುಂಬಯಿ, ಮೇ.31: ವಿದ್ಯಾವಿಹಾರ್ ಪಶ್ಚಿಮದಲ್ಲಿನ ಕಲಾಯಿ ವಿಲೇಜ್ ಅಲ್ಲಿನ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಅವರ ಧರ್ಮಪತ್ನಿ ಪೂರ್ಣಿಮಾ ಹರಿದಾಸ್ ಭಟ್ (46.) ಅವರು ಇಂದಿಲ್ಲಿ ಬೆಳಿಗ್ಗೆ ಮಣಿಪಾಲದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಮೂಲತ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕು ಪೆರ್ಣಂಕಿಲ ನಿವಾಸಿ ಆಗಿದ್ದು, ಪತಿ, ಎರಡು ಸುಪುತ್ರರನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.