Thursday 2nd, May 2024
canara news

ನಿರ್ದೇಶಕ ಸಂತೋಷ್ ಶೆಟ್ಟಿ ಸಾವು: ನಾಲ್ವರ ವಿರುದ್ಧ ಪ್ರಕರಣ

Published On : 01 Jun 2018   |  Reported By : canaranews network


ಮಂಗಳೂರು: ದಕ್ಷಿಣ ಕನ್ನಡದ ಬೆಳ್ತಂಗಡಿ ಬಳಿಯ ಎರ್ಮಾಯಿ ಜಲಪಾತಕ್ಕೆ ಬಿದ್ದು ನಿರ್ದೇಶಕ ಸಂತೋಷ್ ಸಾವನ್ನಪ್ಪಿದ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ಅವರೊಂದಿಗೆ ನಾಲ್ವರು ಸ್ನೇಹಿತರ ತಂಡ ಫೋಟೋಶೂಟ್ ಗಾಗಿ ಎರ್ಮಲ್ ಫಾಲ್ಸ್ಗೆ ತೆರಳಿದ್ದರು, ಅಲ್ಲಿ ಆಯ ತಪ್ಪಿ ಪ್ರಪಾತಕ್ಕೆ ಬಿದ್ದು ಅವರು ಅಸುನೀಗಿದ್ದರು.

ಸೂಕ್ತ ಅನುಮತಿ ಪಡೆಯದೇ ಫೋಟೊಶೂಟ್ಗೆ ತೆರಳಿದ್ದ ಕಾರಣ ಸಂತೋಷ್ ಅವರ ನಾಲ್ವರು ಸ್ನೇಹಿತರ ಮೇಲೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಸಂತೋಷ್ ಸೇರಿ ನಾಲ್ವರು ತಮ್ಮ 'ಕನಸು' ಚಿತ್ರಕ್ಕಾಗಿ ಫೋಟೊಶೂಟ್ಗೆ ತೆರಳಿದ್ದ ವೇಳೆ ಜೋರು ಮಳೆ ಬಂದಿದೆ. ಆಗ ಕಾಲು ಜಾರಿ ಜಲಪಾತದ ಕೆಳಕ್ಕೆ ಸಂತೋಷ್ ಬಿದ್ದು ಸಾವನ್ನಪ್ಪಿದ್ದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here