ಬಿ. ಎಸ್. ಕೆ. ಬಿ. ಎಸೋಸಿಯೇಶನ್, ಗೋಕುಲ, ಇದರ ನೆರೂಲ್ ನಲ್ಲಿರುವ ಹಿರಿಯ ನಾಗರಿಕರ ಆಶ್ರಯಧಾಮ 'ಆಶ್ರಯ' ದಲ್ಲಿ ಕರ್ನಾಟಕ ಸಂಘ ಮಹಿಳಾ ಯಕ್ಷಗಾನ ಮಂಡಳಿ ಚೆನ್ನೈಯ ಪ್ರಸಿದ್ಧ ಮಹಿಳಾ ಯಕ್ಷಗಾನ ಕಲಾವಿದರು ಶನಿವಾರ, ಜೂನ್ ೨, ೨೦೧೮ ರಂದು ಅಪರಾಹ್ನ ೩. ೩೦ ರಿಂದ ೫. ೩೦ ರ ವರೆಗೆ 'ಬಿಲ್ಲ ಹಬ್ಬ' ಎಂಬ ಯಕ್ಷಗಾನ ತಾಳಮದ್ದಳೆಯನ್ನು ಪ್ರಸ್ತುತಪಡಿಸಲಿದ್ದಾರೆ. ಹಿಮ್ಮೇಳದಲ್ಲಿ : ಭಾಗವತಿಕೆಯಲ್ಲಿ ಶ್ರೀ ಬಿ. ಎಮ್ . ರವೀಂದ್ರ ರಾವ್, ಚೆಂಡೆವಾದಕರಾಗಿ ಅಪೂರ್ವ ಆರ್ ಸುರತ್ಕಲ್, ಮದ್ದಳೆಯಲ್ಲಿ ಅಮೋಘ ಆರ್ ಸುರತ್ಕಲ್ ಹಾಗೂ . ಅರ್ಥಧಾರಿಗಳಾಗಿ ಶ್ರೀಮತಿಯರಾದ ಬಿ.ಶಶಿಕಲಾ ರಾವ್, ಉಮಾ ರಾಜ, ಮಧುಮತಿ ರಾವ್, ಸೌಮ್ಯ ಕೃಷ್ಣ, ಕರುಣಾ ಶಿವಕುಮಾರ್, ರಾಜಶ್ರೀ ಭಟ್ ರವರು ಭಾಗವಹಿಸಲಿದ್ದಾರೆ. ಯಕ್ಷಗಾನ ಕಲಾ ಪ್ರೇಮಿಗಳಿಗೆ ಆದರದ ಸ್ವಾಗತವನ್ನು ಕೋರಲಾಗಿದೆ.