Thursday 2nd, May 2024
canara news

ಹರೀಶ್ ಕುಮಾರ್ ರಿಗೆ ಶಾಸಕತ್ವ-*ಪಕ್ಷದ ಸುದೀರ್ಘ ಸೇವೆಗೆ ಸಂದ ಗೌರವ: ಫಾರೂಕ್ ಉಳ್ಳಾಲ್.

Published On : 01 Jun 2018   |  Reported By : Rons Bantwal


ಹರೀಶ್ ಕುಮಾರ್ ಕಾಂಗ್ರೇಸ್ ಪಕ್ಷದ ಕಷ್ಟ ಕಾಲದಲ್ಲಿ ನಿಷ್ಠೆಯಿಂದ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರ ಪ್ರೀತಿಗೆ, ವರಿಷ್ಠರ ಮೆಚ್ಚುಗೆಗೆ ಪಾತ್ರರಾದ ಪ್ರಾಮಾಣಿಕ ರಾಜಕಾರಣಿ*.

   

ಫಾರೂಕ್ ಉಳ್ಳಾಲ್                             ಹರೀಶ್ ಕುಮಾರ್

*ಕಾಂಗ್ರೇಸ್ ಪಕ್ಷದ *ದ.ಕ.ಜಿಲ್ಲಾಧ್ಯಕ್ಷರಾಗಿಯೂ ತನ್ನ ಕರ್ತವ್ಯವನ್ನು ಕಾರ್ಯಕರ್ತರ ಮನಸ್ಸರಿತು ನಿರ್ವಹಿಸುತ್ತಾ ಬಂದ ಶ್ರೀ ಕೆ. ಹರೀಶ್ ಕುಮಾರ್ ರವರನ್ನು ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವ ಪಕ್ಷದ ವರಿಷ್ಠ ಮಂಡಳಿಯ ನಿರ್ಧಾರ, ಪಕ್ಷ ನಿಷ್ಠೆಗೆ ಸಂದ ಅರ್ಹ ಗೌರವ*.

*ಇದು ಪಕ್ಷದ ಸೋಲಿನಿಂದ ನೊಂದ ಕಾರ್ಯಕರ್ತರಲ್ಲಿ ಪುನಶ್ಚೇತನ ತುಂಬಲು ಸಹಕಾರಿಯಾಗಲಿದೆ*.ಎಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ಪ್ರಚಾರ ಸಮಿತಿಯ ವೀಕ್ಷಕ ಶ್ರೀ ಫಾರೂಕ್ ಉಳ್ಳಾಲ್ ಹರ್ಷ ವ್ಯಕ್ತ ಪಡಿಸಿದ್ದಾರೆ. *ಪಕ್ಷದ ಅಧ್ಯಕ್ಷನಾದ ಅಲ್ಪ ಸಮಯದಲ್ಲೇ ಕಾರ್ಯಕರ್ತರ ವಿಶ್ವಾಸ ಗಳಿಸಲು ಸಾಧ್ಯವಾದ ಶೀ ಹರೀಶ್ ಕುಮಾರ್ ಶಾಸಕರಾಗಿಯೂ ಪಕ್ಷ ಮತ್ತು ನಾಡಿನ ಅಭಿವೃದ್ಧಿ- ಕೀರ್ತಿಗೂ ಕಾರಣರಾಗಲಿ*,

*ಹೊಸ ಹುದ್ದೆ ಅಭಿನಂದನಾರ್ಹ ಕೆಲಸಗಳಿಗೆ ಪೂರಕವಾಗಲಿ ಎಂದು ಹಾರೈಸಿರುವ ಶ್ರೀ ಫಾರೂಕ್ ಉಳ್ಳಾಲ್,

ಈ ಆಯ್ಕೆಗೆ ಸಹಕರಿಸಿದ ಹಿರಿಯ ನಾಯಕರಿಗೆ ಕಾರ್ಯಕರ್ತರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರಲ್ಲದೆ, ಶಾಸಕತ್ವದ ಅವಧಿಯಲ್ಲಿ ಹರೀಶ ಕುಮಾರ್ ರಿಗೆ ಉತ್ತರೋತ್ತರ ಯಶಸ್ಸು ಸಿಗಲಿ ಎಂದೂ ಪತ್ರಿಕಾ ಹೇಳಿಕೆಯಲ್ಲಿ ಫಾರೂಕ್ ಉಳ್ಳಾಲ್ ಶುಭ ಕೋರಿದ್ದಾರೆ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here