ಹರೀಶ್ ಕುಮಾರ್ ಕಾಂಗ್ರೇಸ್ ಪಕ್ಷದ ಕಷ್ಟ ಕಾಲದಲ್ಲಿ ನಿಷ್ಠೆಯಿಂದ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರ ಪ್ರೀತಿಗೆ, ವರಿಷ್ಠರ ಮೆಚ್ಚುಗೆಗೆ ಪಾತ್ರರಾದ ಪ್ರಾಮಾಣಿಕ ರಾಜಕಾರಣಿ*.
ಫಾರೂಕ್ ಉಳ್ಳಾಲ್ ಹರೀಶ್ ಕುಮಾರ್
*ಕಾಂಗ್ರೇಸ್ ಪಕ್ಷದ *ದ.ಕ.ಜಿಲ್ಲಾಧ್ಯಕ್ಷರಾಗಿಯೂ ತನ್ನ ಕರ್ತವ್ಯವನ್ನು ಕಾರ್ಯಕರ್ತರ ಮನಸ್ಸರಿತು ನಿರ್ವಹಿಸುತ್ತಾ ಬಂದ ಶ್ರೀ ಕೆ. ಹರೀಶ್ ಕುಮಾರ್ ರವರನ್ನು ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವ ಪಕ್ಷದ ವರಿಷ್ಠ ಮಂಡಳಿಯ ನಿರ್ಧಾರ, ಪಕ್ಷ ನಿಷ್ಠೆಗೆ ಸಂದ ಅರ್ಹ ಗೌರವ*.
*ಇದು ಪಕ್ಷದ ಸೋಲಿನಿಂದ ನೊಂದ ಕಾರ್ಯಕರ್ತರಲ್ಲಿ ಪುನಶ್ಚೇತನ ತುಂಬಲು ಸಹಕಾರಿಯಾಗಲಿದೆ*.ಎಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ಪ್ರಚಾರ ಸಮಿತಿಯ ವೀಕ್ಷಕ ಶ್ರೀ ಫಾರೂಕ್ ಉಳ್ಳಾಲ್ ಹರ್ಷ ವ್ಯಕ್ತ ಪಡಿಸಿದ್ದಾರೆ. *ಪಕ್ಷದ ಅಧ್ಯಕ್ಷನಾದ ಅಲ್ಪ ಸಮಯದಲ್ಲೇ ಕಾರ್ಯಕರ್ತರ ವಿಶ್ವಾಸ ಗಳಿಸಲು ಸಾಧ್ಯವಾದ ಶೀ ಹರೀಶ್ ಕುಮಾರ್ ಶಾಸಕರಾಗಿಯೂ ಪಕ್ಷ ಮತ್ತು ನಾಡಿನ ಅಭಿವೃದ್ಧಿ- ಕೀರ್ತಿಗೂ ಕಾರಣರಾಗಲಿ*,
*ಹೊಸ ಹುದ್ದೆ ಅಭಿನಂದನಾರ್ಹ ಕೆಲಸಗಳಿಗೆ ಪೂರಕವಾಗಲಿ ಎಂದು ಹಾರೈಸಿರುವ ಶ್ರೀ ಫಾರೂಕ್ ಉಳ್ಳಾಲ್,
ಈ ಆಯ್ಕೆಗೆ ಸಹಕರಿಸಿದ ಹಿರಿಯ ನಾಯಕರಿಗೆ ಕಾರ್ಯಕರ್ತರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರಲ್ಲದೆ, ಶಾಸಕತ್ವದ ಅವಧಿಯಲ್ಲಿ ಹರೀಶ ಕುಮಾರ್ ರಿಗೆ ಉತ್ತರೋತ್ತರ ಯಶಸ್ಸು ಸಿಗಲಿ ಎಂದೂ ಪತ್ರಿಕಾ ಹೇಳಿಕೆಯಲ್ಲಿ ಫಾರೂಕ್ ಉಳ್ಳಾಲ್ ಶುಭ ಕೋರಿದ್ದಾರೆ.