Friday 3rd, May 2024
canara news

ಗಾಂಜಾ ಮಾರಾಟ ಪ್ರಕರಣ ನಾಲ್ವರ ಬಂಧನ

Published On : 24 Jul 2018   |  Reported By : canaranews network


ಮಂಗಳೂರು: ಮಾದಕ ವಸ್ತು ಗಾಂಜಾವನ್ನು ಮಂಗಳೂರು ನಗರದಿಂದ ಬುಡ ಸಮೇತ ಕಿತ್ತೆಸೆಯಲು ಮಂಗಳೂರು ಪೊಲೀಸರು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ದಾಳಿಗಳನ್ನು ಈಗಾಗಲೇ ಮಾಡಿದ್ದಾರೆ.ನಗರಕ್ಕೆ ಗಾಂಜಾ ಸರಬರಾಜು ಆಗುವ ಕೇರಳದ ಕಳ್ಳ ದಾರಿಗಳನ್ನು ಮುಚ್ಚಿಸುವ ನಿಟ್ಟಿನಲ್ಲಿ ನಿರಂತರ ದಾಳಿಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ಹಲವಾರು ಗಾಂಜಾ ಸ್ಮಗ್ಲರ್ ಗಳನ್ನು ಬಂಧಿಸಿದ್ದಾರೆ.

ಆದರೆ ನಗರದಲ್ಲಿ ಮಾತ್ರ ಗಾಂಜಾ ವ್ಯವಹಾರ ನಿಯತ್ರಣಕ್ಕೆ ಬರುತ್ತಿಲ್ಲ. ನಗರದ ಉರ್ವಾ ಠಾಣೆಯ ಪೊಲೀಸರು ನಡಡೆಸಿದ ದಾಳಿಯಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಶೋಕ ನಗರ ನಿವಾಸಿಗಳಾದ ನಿಶೀತ್ (22), ವೈಶಾಕ್(18), ಶಕ್ತಿ ನಗರ ನಿವಾಸಿ ಪ್ರೀತಂ (24), ಹಾಗು ಕದ್ರಿ ನಿವಾಸಿ ಸೂರಜ್ (33) ಎಂದು ಗುರುತಿಸಲಾಗಿದೆ. ನಗರದ ದೆಂಬೆಲ್ ಎಂಬಲ್ಲಿ ದಾಳಿ ನಡೆಸಿದ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದಾರೆ.ಈ ನಡುವೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಪೊಲೀಸರು ಬಂದಿಸಿದ್ದಾರೆ.ಬಂಧಿತನನ್ನು ಮಹಮ್ಮದ್ ಹನೀಫ್ ಎಂದು ಗುರುತಿಸಲಾಗಿದ್ದು ಈತ ಈಗಾಗಲೇ ಬಂಧನದಲ್ಲಿರುವ ರೌಡಿ ಅಬ್ದುಲ್ ಅಜೀಝ್ ಎಂಬಾತನ ಸಹಚರ ಎಂದು ಹೇಳಲಾಗಿದೆ . ಬಂಧಿತನಿಂದ 300 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here