ಕುಂದಾಪುರ, ಜು.30: ಜು. 27 ರಂದು ನಿಧನ ಹೊಂದಿದ ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರಿಗೆ ಸಂತ ಮೇರಿಸ್ ಪಿ.ಯು. ಕಾಲೇಜಿನಲ್ಲಿ ಶ್ರದಾಂಜಲಿ ಅಪಿ೯ಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಲಕ್ಷ್ಮಿ ಸೋಮ ಬಂಗೆರಾ ಕಾಲೇಜಿನ ಪ್ರಾಂಸುಪಾಲ ಡಾ| ರಾಜೇಂದ್ರ ಎಸ್.ನಾಯಕರವರು ಆಗಮಿಸಿ ಕಲಾಂ ಅವರ ಜೀವನ ಚರಿತ್ರೆ ಸಾಧನೆ ಆದರ್ಶ ತತ್ವಗಳು ನಮಗೆಲ್ಲರಿಗೂ ಮಾದರಿ ಎನ್ನುತ್ತಾ ಆತ ಅದ್ಬುತ ಕನಸುಗಾರರೆನ್ನುತಾ ಅವರ ಜೀವನದ ಪುಟಗಳನ್ನು ವಿಧ್ಯಾಥರ್ಿಗಳ ಸಭೆಯಲ್ಲಿ ತೆರಿದಿಟ್ಟು ನುಡಿನಮನಗಳನ್ನು ಅಪಿ೯ಸಿದರು
ಉಪನ್ಯಾಸಕಾರಾದ ನಾಗರಾಜ್ ಶೆಟ್ಟಿ ಹಾಗೂ ಉಷಾ ಅವರು ಕಲಾಂ ಅವರ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ವೇದಿಕೆಯಲ್ಲಿ ಪ್ರಾಂಶುಪಾಲಾರಾದ ಧರ್ಮಗುರು ಪ್ರವೀಣ್ ಮಾಟಿ೯ಸ್, ಉಪ ಪ್ರಾಂಶುಪಾಲೆ ಮಂಜುಳಾ ನಾಯರ್, ಹೋಲಿ ರೊಜರಿ ಆಂಗ್ಲಾ ಶಾಲೆಯ ಮುಖ್ಯಪಾಧ್ಯಾಯಿನಿ ಜೊಯ್ಸ್ಲಿನ್ ಉಪಸ್ಥಿರರಿದ್ದರು.
ಉಪನ್ಯಾಸಕ ರವಿ ಶೆಟ್ಟಿ ಸಾಕ್ಷ ಚಿತ್ರಗಳ ಮೂಲಕ ಕಲಾ ಅವರ ಜೀವನ ಚರಿತ್ರೆಯನ್ನು ಪ್ರಸ್ತುತ ಪಡಿಸಿದರು. ಉಪನ್ಯಾಸಕರಾದ ರೇಶ್ಮಾ ಫೆನಾ೯೦ಡಿಸ್ ಸ್ವಾಗತಿಸಿದರು, ಜೊಯ್ಲಿನ್ ಸಾಲಿನ್ಸ್ ವಂದಿಸಿದರು, ರೇಶ್ಮಾ ಫೆನಾ೯೦ಡಿಸ್ ಕಾರ್ಯಕ್ರಮವನ್ನು ನಿರುಪಿಸಿದರು