ಮುಂಬಯಿ (ಆರ್ಬಿಐ), ಎ.12: ಜೈನ ಕಾಶಿ ಮೂಡುಬಿದಿರೆ ಇಲ್ಲಿಗೆ 108 ಪೂರಣ ಸಾಗರ್ ಮುನಿ ಇಂದು ಕಾರ್ಕಳದಿಂದ ಆಗಮಿಸಿ ಪುರಪ್ರವೇಶ ಮಾಡಿದರು. ನಿನ್ನೆ 108ಕುಂಥು ಸಾಗರ ಮುನಿ ಮಹಾರಾಜ್ ಅವರು ಪುರಪ್ರವೇಶ ಮಾಡಿದ್ದು ಇಬ್ಬರು ದಿಗಂಬರ ಸಾಧುಗಳು ರಾಷ್ಟ್ರ ಸಂತ ಆಚರ್ಯ ವಿದ್ಯಾ ಸಾಗರ ಶಿಷ್ಯರಾಗಿದ್ದು ಕುಂಥು ಸಾಗರ ಮುನಿರಾಜ್ ಜೈನ ಕಾಶಿಯಲ್ಲಿ ನಾಲ್ಕು ದಿನ ಮೊಕ್ಕಾಂ ಇದ್ದು, ಇಂದು ಶುಕ್ರವಾರ (ಎ.12) ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಗುರುಗಳ ಪಾದ ಪೂಜೆ ನೆರವೇರಿಸಿ ಸಿದ್ದಾಂಥ ದರ್ಶನÀ, ರತ್ನ ಬಿಂಬ ದರ್ಶನ, 18 ಬಸದಿ ದರ್ಶನÀ ನೆರವೇರಿತು.
ಕಾರ್ಕಳ ದಿಂದ ಮುನಿ ವಿಹಾರ ಜತೆಗೆ ಸನತ್ ಕುಮಾರ್, ರಾಕೇಶ್ ಜೈನ್, ಮಹಾಲಕ್ಷಿ ್ಮ ಜೈನ್, ರೋಹಿಣಿ, ಸುರಕ್ಷಾ ಮೊದಲಾದವರು ಜತೆಗಿದ್ದರು. ಶ್ರೀ ಜೈನ ಮಠ ಮೂಡುಬಿದಿರೆ ಇದರ ವ್ಯವ ಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಉಪಸ್ಥಿತರಿದ್ದು ಸಂಜೆ ಗುರುಗಳ ಆರತಿ, ಸ್ವಾಧ್ಯಯ ಕಾರ್ಯಕ್ರಮ ಶ್ರೀ ಮಠದಲ್ಲಿ ಆಯೋಜನೆ ಗೊಳಿಸಲ್ಪಟ್ಟಿತು.