ಮಂಗಳೂರು: ಎತ್ತಿನಹೊಳೆ ಯೋಜನೆ ಎಂಬುದು ಮಹಾಮೋಸ, ಕರಾವಳಿ, ಬಯಲು ಸೀಮೆಯ ಜನರಿಗೆ ಮಾಡುತ್ತಿರುವ ನಂಬಿಕೆ ದ್ರೋಹ. ಯೋಜನೆಯ ಸತ್ಯಾಂಶ ವನ್ನು ತಿಳಿಯಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಬೇಕು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಅವರು ಆಗ್ರಹಿಸಿದ್ದಾರೆ.ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಗಮನಹರಿಸಬೇಕೆಂದು ಆಗ್ರಹಿಸಿದ್ದಾರೆ.
ಯೋಜನೆ ಕುರಿತ ಜನಾರ್ದನ ಪೂಜಾರಿ ಅವರ ಅಭಿಪ್ರಾಯಗಳನ್ನು ಆಲಿಸಬೇಕು ಎಂದು ಎಐಸಿಸಿ ನೀಡಿದ ಸೂಚನೆ ಯನ್ನು ಮುಖ್ಯಮಂತ್ರಿ ಪಾಲಿಸಿಲ್ಲ. ಈಗ ತನಿಖಾ ಆಯೋಗ ರಚನೆ ಬಗ್ಗೆ ನೀವು ಮಾಡಿರುವ ಆಗ್ರಹವನ್ನು ಕೇಳುತ್ತಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೂಜಾರಿ ಅವರು, ಹೇಳುವುದು ನನ್ನ ಕರ್ತವ್ಯ; ಮಾಡುವುದು ಅವರ ರಾಜಧರ್ಮ ಎಂದು ತಿಳಿಸಿದರು.