ರೈಲ್ವೇ ಬಜೆಟ್ ನಲ್ಲಿ ರಾಜ್ಯಕ್ಕೆ ಏನೂ ಪ್ರಯೋಜನವಾಗಿಲ್ಲ. ಯುಪಿಎ ಸರ್ಕಾರವಿದ್ದಾಗ ಬಿಜೆಪಿಗರು ಟೀಕಾ ಪ್ರಹಾರ ಮಾಡಿದ್ದರು. ಇದೀಗ ಅವರು ಅಧಿಕಾರದಲ್ಲಿದ್ದು, ಭಾರೀ ನಿರೀಕ್ಷೆ ಇಡಲಾಗಿದ್ದು, ರೈಲ್ವೇ ಬಜೆಟ್ ರಾಜ್ಯಕ್ಕೆ ನಿರಾಶದಾಯಕ ಬಜೆಟ್ ಆಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ರೈಲ್ವೇ ಸಚಿವರಾಗಿ ಘೊಷಣೆ ಮಾಡಿದ ಯೋಜನೆಯೂ ಜಾರಿಯಾಗಿಲ್ಲ. ಮಂಗಳೂರಿಗೆ ಪ್ರತ್ಯೇಕ ಪ್ರಾದೇಶಿಕ ಕಚೇರಿ ಮಾಡಬೇಕೆಂಬ ಪ್ರಸ್ತಾಪ ಇತ್ತು. ಮೋದಿ ಸರ್ಕಾರದಲ್ಲಿ ಅದಕ್ಕೆ ಹಿನ್ನಡೆಯಾಗಿದೆ. ಮಂಗಳೂರು ಸೆಂಟ್ರಲ್ ವಿಶ್ವದರ್ಜೆಗೆ ಏರಿಸುವ ಯೋಜನೆಯೂ ನೆನೆಗುದಿಗೆ ಬಿದ್ದಿದೆ. ಇನ್ನೂ, ಹಲವಾರು ನಿರೀಕ್ಷೆಗಳು ಕನಸಾಗಿಯೇ ಉಳಿದಿವೆ ಎಂದು ಸಚಿವ ರಮನಾಥ ರೈ ಅಸಮಾಧಾನ ವ್ಯಕ್ತಪಡಿಸಿದರು.