ಮಂಗಳೂರು: ಕೇರಳದ ಪಯ್ಯನ್ನೂರು ಠಾಣಾ ವ್ಯಾಪ್ತಿಯಲ್ಲಿ ಮಾ.೨ರಂದು ವಿವಾಹಿತ ಮಹಿಳೆಯನ್ನು ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ನೆಲ್ಯಾಡಿಯ ಶಿರಾಡಿ ಸಮೀಪ ಹೋಟೆಲೊಂದರ ಬಳಿ ಸಾರ್ವಜನಿಕರ ಸಹಕಾರದಿಂದ ಪತ್ತೆ ಹಚ್ಚಿ ಬಂಧಿಸಿದ ಘಟನೆ ನಡೆದಿದೆ.
ಪಯ್ಯನ್ನೂರು ಠಾಣಾ ವ್ಯಾಪ್ತಿಯ ಆಲಕ್ಕೋಡ್ ಬಳಿ ವಿವಾಹಿತ ಮಹಿಳೆಯ ಮೇಲೆ ಅದೇ ಊರಿನ ಪ್ರತಾಪ್ ಚಂದ್ರನ್ ಹಾಗೂ ಜೇಮ್ಸ್ ಎಂಬವರು ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು. ಆರೋಪಿಗಳ ಬಗ್ಗೆ ತನಿಖೆ ನಡೆಸಿ ಪೊಲೀಸರು ಪಯ್ಯನ್ನೂರು ಠಾಣಾ ಎಸ್ ಐ ವಿಬಿನ್ ನೇತೃತ್ವದ ತಂಡದ ಮೂಲಕ ಕಾರ್ಯಾಚರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.