ಹೆಬ್ರಿ: ಹೆಬ್ರಿ ಸಮೀಪದ ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆ ವತಿಯಿಂದ ನಾಟ್ಕದೂರಿನ ಬಯಲು ರಂಗಮಂದಿರದಲ್ಲಿ 7 ದಿನಗಳ ಕಾಲ ನಡೆದ 6ನೇ ವರ್ಷದ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ - 2016 ಸಮಾರೋಪ ಸಮಾರಂಭದ ಹಿನ್ನಲೆಯಲ್ಲಿ ಸೋಮವಾರ ಮುದ್ರಾಡಿ ಮಹಾಗಣಪತಿ ದೇವಸ್ಥಾನದಿಂದ ನಾಟ್ಕದೂರು ಆದಿಶಕ್ತಿ ದೇವಸ್ಥಾನದ ತನಕ ರಾಜ್ಯದ ವಿವಿಧ ಜನಪದ ತಂಡಗಳ ಆಕರ್ಷಕ ಮೆರವಣಿಗೆಯನ್ನು ಖ್ಯಾತ ಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು,ನಟ ಸಂಚಾರಿ ವಿಜಯ್,ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ಚೆಂಡೆ ಭಾರಿಸುವ ಮೂಲಕ ಚಾಲನೆ ನೀಡಿದರು.ಡಾ.ಬಿ.ದೇವದಾಸ ಪೈ,ಧರ್ಮಯೋಗಿ ಮೋಹನ್,ಸುಕುಮಾರ್ ಮೋಹನ್,ಜಗದೀಶ ಜಾಲ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದರು.