ಮಂಗಳೂರು: ಬುದ್ಧಿವಂತರ ಜಿಲ್ಲೆ ಎಂದು ಹೇಳಲಾಗುವ ದ.ಕ. ಜಿಲ್ಲೆಯಲ್ಲಿ 2014, 15 ಹಾಗೂ 16ನೇ ಸಾಲಿನಲ್ಲಿ ಕಾಣೆಯಾದವರ ಕುರಿತು ಒಟ್ಟು 366 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ ಹೆಚ್ಚಿನವರು ಇನ್ನೂ ಪತ್ತೆಯಾಗಿಲ್ಲ. ಕೆಲವರು ಶವವಾಗಿ ಪತ್ತೆಯಾಗಿದ್ದಾರೆ. ಆದರೆ, ಹಲವು ಪ್ರಕರಣಗಳಲ್ಲಿ ನಾಪತ್ತೆಯಾಗಲು ಹಾಗೂ ಶವವಾಗಿ ಪತ್ತೆಯಾಗಲು ನೈಜ ಕಾರಣ ಏನೆಂದು ಪೊಲೀಸ್ ಇಲಾಖೆಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಕಾಣೆಯಾದವರ ಕುರಿತು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2014ರಲ್ಲಿ 172, 2015ರಲ್ಲಿ 178 ಹಾಗೂ 2016ರಲ್ಲಿ 16 ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ 2015ರ ಸಾಲಿನಲ್ಲಿ ಮಾತ್ರ ಕಾಣೆಯಾಗಿ ವಿಷಕಾರಿ ಅಂಶದಿಂದ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ 3 ಪ್ರಕರಣಗಳು ವರದಿಯಾಗಿವೆ.