ಮಂಗಳೂರು: ಗ್ಯಾಸ್ ಟ್ಯಾಂಕರೊಂದು ಉರುಳಿಬಿದ್ದು ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ಶಿರಾಡಿ ಅಡ್ಡಹೊಳೆಯಲ್ಲಿ ಶುಕ್ರವಾರ ಮುಂಜಾನೆ ೭ ಗಂಟೆ ಸುಮಾರಿಗೆ ನಡೆದಿದೆ. ಇದರ ಪರಿಣಾಮ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಎರಡು ಕಡೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ರಾ.ಹೆ. ೭೫ ರ ಸಂಚಾರ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು.
ಘಟನಾ ಸ್ಥಳಕ್ಕೆ ನೆಲ್ಯಾಡೀ ಹೊರಸ್ಟೇಷನ್ ಪೊಲೀಸರು ಹಾಗೂ ಅಗ್ನಿಶಾಮಕದಳದವರು ಭೇಟಿ ನೀಡಿ ಪಲ್ಟಿಯಾದ ಟ್ಯಾಂಕರ್ ನಿಂದ ಬೇರೊಂದ್ಯ್ ಟ್ಯಾಂಕರ್ ಗೆ ಗ್ಯಾಸ್ ತುಂಬಿಸಿ ಹೆಚ್ಚಿನ ದುರಂತ ತಪ್ಪಿಸಿದ್ದಾರೆ. ಘಟನೆಯಿಂದ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.