ಮುಂಬಯಿ, ಮಾ.20: ಜಾಗತಿಕ ಮಹಿಳಾ ದಿನಾಚಣೆಯ ಅಂಗವಾಗಿ ಅಖಿಲ ಕರ್ನಾಟಕ ಜೈನ್ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಕಳೆದ ಭಾನುವಾರ ಘಾಟ್ಕೋಪರ್ ಪೂರ್ವದ ಗುರುಕುಲ್ ಕಾಲೇಜಿನ ಸಭಾಗೃಹದಲ್ಲಿ ಮಹಿಳಾ ದಿನಾಚರಣೆ ಸಂಭ್ರಮಿಸಿತು.
ಆ ನಿಮಿತ್ತ ಹಳದಿ ಕುಂಕುಮ ಕಾರ್ಯಕ್ರಮ, ನಂತರ ಯೋಗ ಶಿಕ್ಷಕಿ ಪದ್ಮಪ್ರಿಯಾ ಬಲ್ಲಾಳ್ ಅವರಿಂದ ದಿನನಿತ್ಯದ ಜೀವನದಲ್ಲಿ ಯೋಗದ ಅಳವಡಿಕೆ ಹಾಗೂ ಅದರ ಉಪಯೋಗಳು ಇದರ ಬಗ್ಗೆ ವಿಶೇಷ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಪ್ರಯಾಸವಿಲ್ಲದೆ ದಿನನಿತ್ಯದ ಕಾರ್ಯಗಳಲ್ಲಿ ಯಾವ ರೀತಿಯಲ್ಲಿ ಯೋಗವನ್ನು ಅಳವಡಿಸಿಕೊಂಡು ರೋಗ ಮುಕ್ತರಾಗಿ ಜೀವನವನ್ನು ನಡೆಸಬಹುದು ಎಂಬ ಮಾಹಿತಿ ನೆರೆದ ಸಂಘದ ಸದಸ್ಯರಿಗೆ ನೀಡಲಾಗಿ ಸುಲಭವಾದ ಯೋಗಾಸನ, ಪ್ರಾಣಾಯಾಮ ಹಾಗೂ ಯೋಗಮುದ್ರೆಗಳನ್ನು ಕಲಿಸಲಾಯಿತು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ವೈ.ಜಿ. ಶೆಟ್ಟಿ ಸ್ಮಾರಕ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಸಂಘದ ಹಿರಿಯ ಸದಸ್ಯೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಾಣಿ ವೈಧ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಸುಜಾತ ಭರತ್ ಜೈನ್, ರೇಷ್ಮ ಸಂತೋಷ್ ಜೈನ್, ಕವಿತಾ ಜೈನ್ ಮತ್ತು ಸುಪ್ರಿಯಾ ಮನೀಷ್ ಹೆಗ್ಡೆ, ಸುನೀತಾ ಬಲ್ಲಾಳ್, ಪದ್ಮಾವತಿ ಜೈನ್, ವಿನಂತಿ ಹೆಗ್ಡೆ, ಪವಿತ್ರ ಜೈನ್, ಕವಿತಾ ಜೈನ್, ಸೌಮ್ಯ ಜೈನ್, ಶ್ವೇತಾ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.