ಮಂಗಳೂರು: ಸರ್ಕಾರ ಭ್ರಷ್ಟರ ರಕ್ಷಣೆ ಮಾಡುವ ಉದ್ದೇಶದಿಂದ ಎಸಿಬಿ ರದ್ದುಗೊಳಿಸಿದೆ. ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ಸರಕಾರ ನಿಂತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರ್ ಜೊತೆ ಮಾತನಾಡಿದ ಅವರು, 2015ರಲ್ಲಿ ತರಬೇತಿಗೆ ಹೋಗಿದ್ದ ವೇಳೆ ಅನುಚಿತ ವರ್ತನೆ ತೋರಿದ ರಾಜ್ಯದ ಐಪಿಎಸ್ ಅಧಿಕಾರಿಯೋರ್ವರ ವಿರುದ್ಧ 1 ತಿಂಗೊಳಗೆ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸ್ಸು ಮಾಡಲಾಗಿದ್ದರೂ ಈವರೆಗೆ ಕ್ರಮ ಆಗಿಲ್ಲ ಎಂದರು.
ಭ್ರಷ್ಟಾಚಾರದ ಕುರಿತು ನನ್ನ ಹೋರಾಟಕ್ಕೆ ಪರಿಣಾಮಕಾರಿ ಸ್ಪಂದನೆ ದೊರಕದಿರುವುದರಿಂದ ಒಂದು ರೀತಿಯ ಭ್ರಮ ನಿರಸನವಾಗಿರುವುದು ನಿಜ. ಇದಕ್ಕೆಒಂದು ತಾರ್ಕಿಕ ಅಂತ್ಯ ನೀಡಬೇಕಾದ ವ್ಯವಸ್ಥೆಯೇ ಇದರ ಪರವಾಗಿ ನಿಲ್ಲುವಂತ ಪರಿಸ್ಥಿತಿ ಇಂದು ಕಂಡುಬರುತ್ತಿದೆ ಎಂದರು.ಸಿದ್ದರಾಮಯ್ಯ ಅವರು ಎಸಿಬಿ ಯನ್ನು ಜಾರಿಗೆ ತಂದಿರುವುದೇ ಭ್ರಷ್ಟಾಚಾರಿಗಳನ್ನು ರಕ್ಷಣೆ ಮಾಡಲು. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಎಸ್ ಅಧಿಕಾರಕ್ಕೆ ಬಂದರೆ 24 ತಾಸುಗಳ ಒಳಗೆ ಎಸಿಬಿಯನ್ನು ರದ್ದುಪಡಿಸುತ್ತೇನೆ. ಭ್ರಷ್ಟಾಚಾರ ನಡೆಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಕುಮಾರ ಸ್ವಾಮಿ ಹೇಳಿದರು.